ಬೆಳಗಾವಿ : ಬೆಳಗಾವಿ ನಗರದಲ್ಲಿ ಮುಗ್ಧ ಆಟೋ ಚಾಲಕರನ್ನು ಗುರಿಯಾಗಿಸಿ ಹೊಸ ಆಪ್ ಗಳ ಬಂದು ಆಟೋ ಚಾಲಕರ ಭವಿಷ್ಯಕ್ಕೆ ಕುತ್ತು ತರುವ ತೀವ್ರ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಈಗಾಗಲೇ ಸರ್ಕಾರದ ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಬಾಡಿಗೆ ಇಲ್ಲದೆ ಜೀವನ ನಿರ್ವಹಿಸಿದ್ದು ತುಂಬಾ ಕಷ್ಟಕರ ವಾಗಿದೆ ಹೊಸ ಆಟೋ ಖರೀದಿಸುವರು ಲೋನ್ ಕಂತು ತುಂಬಲಾರದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಬೆಳಗಾವಿ ನಗರದಲ್ಲಿ ಸರಿಸುಮಾರು 10,000 ಆಟೋರಿಕ್ಷಗಳು ನಿರಂತರ ಸಾರ್ವಜನಿಕರ ಸೇವೆಯಲ್ಲಿ ತೊಡಗಿವೆ ಹೀಗಿರುವ ಜನರ ಸಂಖ್ಯೆ ಆಧಾರದ ಪ್ರಕಾರ ಈಗಿರುವ ವಾಹನಗಳು ಹೆಚ್ಚಾಗಿದ್ದಾವೆ ಮತ್ತು ಇವುಗಳಿಗೆ ಬಾಡಿಗೆ ಇಲ್ಲದಾಗಿದೆ ಹೀಗೆ ಆಟೋ ಗಳಿಗೆ ಬಾಡಿಗೆ ಇಲ್ಲದಿರುವ ಸಮಯದಲ್ಲಿ ಓಲಾ ಮತ್ತು ಉಬರ್ ಜಿಗ್ನೊ ರಾಬಿಟ್ ಯಾತ್ರಿಯ ಹಾಗೂ ಇತರೆ ಸಂಸ್ಥೆಯವರು ಆಪ್ ಮೂಲಕ ಮುಗ್ಧ ಆಟೋ ಚಾಲಕರನ್ನು ಗುರಿಯಾಗಿಸಿಕೊಂಡು ಬಾಡಿಗೆ ಹೊಡೆಯಲು ತಯಾರಿ ನಡೆಸಿದ್ದು ಕಾರಣ ಇಂತಹ ಸಂಕಷ್ಟ ಸಮಯದಲ್ಲಿ ತಾವು ಆಟೋ ಚಾಲಕರ ನೆರವಿಗೆ ಬಂದು ಯಾವುದೇ ಆ್ಯಪ್ ಗಳಿಗೆ ಪರವಾನಿಗೆ ನೀಡಬಾರದೆಂದು ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು . ರಾಜ್ಯ ಪ್ರಧಾನ ಕಾರ್ಯದರ್ಶಿ ಜೀವನ ಉತ್ಕುರಿ. ರಾಜ್ಯದ್ಯಕ್ಷರು ಶೇಖರಯ್ಯ ಮಠಪತಿ. ಗೌರವಾಧ್ಯಕ್ಷರು ಬಾಬಜನ್ ಬಳಗಾನೂರು ಅಧ್ಯಕ್ಷ ಮನ್ಸೂರು ಹೊಂಗೇಕರ್ ಮತ್ತಿತರು ಉಪಸ್ಥಿದ್ದಿದ್ದರು.
ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ




