ಧಾರವಾಡ: ನಗರದ ಮಾಳಮಡ್ಡಿಯ ಲಕ್ಸ್ಮಿಸಿಂಗನಕೇರಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನದ ಜಾತ್ರಾ ಮಹೋತ್ಸವ ಇದೇ ಅಕ್ಟೋಬರ್ 1 ನೇ ತಾರೀಕಿನಂದು ಬಹಳ ಅದ್ದೂರಿಯಾಗಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 6 ಗಂಟೆಗೆ ದುರ್ಗಾ ಹೋಮ, 10 ಗಂಟೆಗೆ ಎಲ್ಲಾ ಗೌರವನ್ವಿತರಿಗೆ ಸನ್ಮಾನ ಕಾರ್ಯಕ್ರಮ, ಭವ್ಯ ಮೆರವಣಿಗೆ, ಸಾಯಂಕಾಲ 7 ಗಂಟೆಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುವದು ಎಂದು ಜಾತ್ರಾ ಮಹೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷ ಶ್ರೀ ಮಾರುತಿ ಮಾಕಡವಾಲೆ ತಿಳಿಸಿದರು.
ಜಾತ್ರಾ ಮಹೋತ್ಸವದ ದಿವ್ಯ ಸಾನಿದ್ಯವನ್ನು ಮನಸೂರು ಮಹಾಮಠದ ಶ್ರೀ ಬಸವರಾಜ ದೇವರು ವಹಿಸಲಿದ್ದಾರೆ. ಈ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ಧಾರವಾಡ ನಗರದಲ್ಲಿ ನಡೆಯಲಿದ್ದು ಮಹೋತ್ಸವದಲ್ಲಿ ಜಿಲ್ಲೆಯ ಎಲ್ಲಾ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಂಧರ್ಭದಲ್ಲಿ ಗೋವಿಂದ ಮಾಕಡವಾಲೆ, ಛತ್ರಪತಿ,ಬಸವರಾಜ ಮಾಕ ಡವಾಲೆ,ರಾಘವೇಂದ್ರ ಮಾಕಡವಾಲೆ, ಅಜಯ್ ಹಾಗೂ ಯುವಕರು ಇದ್ದರು.
ವರದಿ: ವಿನಾಯಕ ಗುಡ್ಡದಕೇರಿ




