Ad imageAd image

ಅಜಂಪೀರ್ ಕಾದ್ರಿ ಹುಟ್ಟು ಹಬ್ಬದ ನಿಮಿತ್ಯ ಖಾದ್ರಿ ಅಭಿಮಾನ ಬಳಗದಿಂದ ಬಡ ರೋಗಿಗಳಿಗೆ ಹಣ್ಣು ಹಂಪಲಗಳ ವಿತರಣೆ

Bharath Vaibhav
WhatsApp Group Join Now
Telegram Group Join Now

ಹಾವೇರಿ: ಮಾಜಿ ಶಾಸಕ ಅಜಂಪೀರ್ ಕಾದ್ರಿ ಸರ್ ಹುಟ್ಟು ಹಬ್ಬದ ನಿಮಿತ್ಯ ಖಾದ್ರಿ ಅಭಿಮಾನ ಬಳಗದಿಂದ ಬಡ ರೋಗಿಗಳಿಗೆ ಹಣ್ಣು ಹಂಪಲಗಳ ವಿತರಣೆ

ದಿನಾಂಕ 01/06/2024 ರಂದು ಶಿಗ್ಗಾಂವ ಸವಣೂರ ಕ್ಷೇತ್ರದಲ್ಲಿ ಕೆಳೆದ 25 ವರ್ಷಗಳಿಂದ ಜನ ಸೇವೆ ಮಾಡುತ್ತಾ ಕಾಂಗ್ರೆಸ್ಸಿನ ಶಿಸ್ತು ಸಿಪಾಯಿರಾದ ಮಾಜಿ ಶಾಸಕರಾದ ಸೈಯದ ಅಜೀಮಪೀರ ಎಸ್. ಖಾದ್ರಿ ಅವರ ಹುಟ್ಟು ಹಬ್ಬ ಆಚರಣೆಯನ್ನು ಮಾಡಲಾಯಿತು.

ಇದೇ ದಿನಾಂಕ 2/4/2024 ರಂದು ಸವಣೂರ ತಾಲೂಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಣೆ ಮಾಡಿದರು.

ಮಾಜಿ ಶಾಸಕರಾದ ಸೈಯದ್ ಅಜಂಪೀರ್ ಖಾದ್ರಿ ಯವರದು ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಸವಣೂರು ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ವಾರ್ಡ್ ಗಳ ಒಳ ಮತ್ತು ಹೊರರೋಗಿಗಳಿಗೆ ಬ್ರೆಡ್, ಪೌಷ್ಟಿಕ ಆಹಾರದ ಪಟ್ಟಣಗಳ ಜೊತೆಗೆ ಹಣ್ಣು ಹಂಪಲು ವಿತರಿಸಲಾಯಿತು…. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವರಾಜ್ ಅಮರಾಪುರ ರವರು ಮಾತನಾಡಿ ಇದು ಅವರ ಅಭಿಮಾನಿಗಳ ವಿಶ್ವಾಸಿಗಳ ಪಾಲಿಗೆ ಸಂಭ್ರಮದ ದಿನವಾಗಿದೆ ಕ್ಷೇತ್ರದ ಜನರ ಮನದಲ್ಲಿ ಖಾದ್ರಿ ಸಾಹೇಬ್ರು ಎಂದೆ ಪ್ರಖ್ಯಾತಿ ಗಳಿಸಿದ ಶಾಸಕರು. ಅಭಿವೃದ್ಧಿ ಕೆಲಸಗಳಿಂದ ತಾಲೂಕಿನ ಮನೆ ಮಾತಾಗಿದ್ದಾರೆ. ಖಾದ್ರಿ ಸಾಹೇಬ್ರು ಎಂತಹ ಸಮಯದಲ್ಲೂ ಸಹ ಜನರ, ರೈತರ ಸಮಸ್ಯೆಗಳು ಹಾಗೂ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುವ ಸರಳ ನಾಯಕರು. ಅವರಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅನೇಕ ಜನ ಅಭಿಮಾನಿ ಬಳಗ ಸೇರಿದರು ಬುಡ್ದೆಸಾಬ್ ಹಕ್ಕಿಮ, ಇಮ್ತಿಯಾಜ್ ನೆರ್ತಿ, ಅಬ್ದುಲ್ ಖಾದರ್ ಮತ್ತಿಗಟ್ಟಿ, ಖಾಸಿಂ ಕಂದಿಲವಾಲೆ, ಮೊಹಮ್ಮದ್ ರಫಿ ಮುಲ್ಲಾ, ಅಮೀನ್ ಸಾಬ್ ಹವಾಲ್ದಾರ್, ಫಾಜಿಲ್ ಮನಿಯಾರ್, ಆಯುಬ್ ಗದಗ್, ರೆಹ್ಮಾನಬೆಗ್ ಚಿಲ್ಲೂರ್, ಶಫಿ ಸೋಲ್ಲಾಪುರಿ, ಸಾಧಿಕ್ ಮೋಮಿನ್ ಇತರರು ಉಪಸ್ಥಿತರಿದ್ದರು…

ವರದಿ: ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!