Ad imageAd image
- Advertisement -  - Advertisement -  - Advertisement - 

ರಾತ್ರೋರಾತ್ರಿ ಮುಖ್ಯಮಂತ್ರಿ ಬದಲಾವಣೆ ಸನ್ನಿಹಿತ:ಸಂಸದ ಬೊಮ್ಮಾಯಿ 

Bharath Vaibhav
ರಾತ್ರೋರಾತ್ರಿ ಮುಖ್ಯಮಂತ್ರಿ ಬದಲಾವಣೆ ಸನ್ನಿಹಿತ:ಸಂಸದ ಬೊಮ್ಮಾಯಿ 
BOMMAI
WhatsApp Group Join Now
Telegram Group Join Now

ಗದಗ : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ರಾತ್ರೋರಾತ್ರಿ ಮುಖ್ಯಮಂತ್ರಿ ಬದಲಾವಣೆ ಸನ್ನಿಹಿತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾತ್ರೋರಾತ್ರಿ ಎರಡು ಸಿಎಂಗಳು ಬದಲಾದ ಇತಿಹಾಸವಿದೆ.ಈಗ ಕೆಲವರು ಸಿಎಂ ಕುರ್ಚಿಗೆ ಆಸೆ ತೋರಿಸುತ್ತಿರುವುದನ್ನು ನೋಡಿದ್ರೆ ಮತ್ತೊಂದು ರಾತ್ರೋರಾತ್ರಿ ಸಿಎಂ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದರೂ ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು. ಬಳಿಕ ಆರ್. ಗುಂಡೂರಾವ್ ಸಿಎಂ ಆದರು. ಅರಸು ಎರಡನೇ ಬಾರಿ ಸಿಎಂ ಆಗಿದ್ದರು. ಎಸ್. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿತ್ತು. ಆಗಲೂ ಸಿಎಂ ಬದಲಾದರು ಹೀಗೆ ರಾಜಕಾರಣ ನಡಿಯುತ್ತಾ ಇರುತ್ತದೆ ಎಂದರು.

 

WhatsApp Group Join Now
Telegram Group Join Now
Share This Article
error: Content is protected !!