ಧಾರವಾಡ : ಮುರಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವವನ್ನು ಉದ್ಘಾಟನೆ ಮಾಡಲಾಯಿತು.

ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಜಾರಿಗೊಳಿಸುತ್ತಿರುವ ಸಾಕಷ್ಟು ಸೌಲಭ್ಯಗಳ ಜೊತೆಗೆ ಎಲ್ಲಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಮುದಾಯ ಸಹಭಾಗೀತ್ವ ಅತ್ಯಾವಶಕತೆ ಇದೆ, ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಮಕೃಷ್ಣ ಸದಲಗಿ ಅಭಿಪ್ರಾಯಪಟ್ಟರು.
ದಿವ್ಯ ಸಾನಿಧ್ಯ ವಹಿಸಿದ್ದ ನಾಗಭೂಷಣ ಶಿವಯೋಗಿಗಳು ಮತ್ತು ಯೋಗ ಗುರು ವೈದ್ಯ ಚನ್ನಬಸವ ಗುರುಗಳು ಮಕ್ಕಳಿಗೆ ಯೋಗದ ಮಹತ್ವ ಮತ್ತು ಆರೋಗ್ಯದ ರಕ್ಷಣೆಯ ಸೂತ್ರಗಳನ್ನು ಉತ್ತಮವಾಗಿ ತಿಳಿಸಿದರು.
ಸಂಧರ್ಭದಲ್ಲಿ ಕಾರ್ಮಿಕ ಸಚಿವರ ಆಪ್ತ ಸಹಾಯಕರಾದ ಶ್ರೀಕಾಂತ ಗಾಯಕವಾಡ, ನಾಗರಾಜ ಘಾಟಿನ, ಮಲ್ಲವ್ವ ಹರಿಜನ, ರಾಘವೇಂದ್ರ ಪರಸಪ್ಪನವರ ಮತ್ತು ಗ್ರಾಮಸ್ಥರು ಇದ್ದರು.
ವರದಿ : ವಿನಾಯಕ ಗುಡ್ಡದಕೇರಿ




