Ad imageAd image
- Advertisement -  - Advertisement -  - Advertisement - 

ಗಣೇಶ್ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಧೋಳ್ ಠಾಣೆಯಲ್ಲಿ ಶಾಂತಿ ಸಭೆ.

Bharath Vaibhav
ಗಣೇಶ್ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಧೋಳ್ ಠಾಣೆಯಲ್ಲಿ ಶಾಂತಿ ಸಭೆ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಮುಧೋಳ್ ವಲಯದ ಠಾಣೆಯಲ್ಲಿ ಇಂದು ದಿನಾಂಕ 6/09/2024ರಂದು ಈದ್ ಮಿಲಾದ್ ಹಾಗೂ ಗಣೇಶ್ ಹಬ್ಬ ಪ್ರಯುಕ್ತ ಪೊಲೀಸ್ ಇನ್ಸಪೆಕ್ಟರ್ ದೌಲಾತ್ ಎನ್ ಕುರಿ ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿದರು.

ಈ ಸಭೆಯಲ್ಲಿ ಮುಧೋಳ್ ಗ್ರಾಮದ ವಿವಿಧ ಬಡಾವಣೆಯ ಗಣೇಶ್ ಉತ್ಸವ ಸಮಿತಿಯ ಅಧ್ಯಕ್ಷರುಗಳು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಗಣೇಶೋತ್ಸವ ಸಮಿತಿಯ ಅಧ್ಯಕ್ಷರುಗಳು ಭಾಗಿಯಾಗಿದ್ದರು.ಈ ಸಭೆಯಲ್ಲಿ ಮುಧೋಳ್ ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಅಶೋಕ್ ಪಿರಂಗಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗಣೇಶ್ ಹಬ್ಬವನ್ನು ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದು ಬ್ರಿಟಿಷರು ನಮ್ಮ ಭಾರತೀಯರನ್ನು ಎಲ್ಲಿಯೂ ಕೂಡ ಸೇರಲು ಬಿಡುತ್ತಿರಲಿಲ್ಲ ಅದ ಕಾರಣ ಈ ಹಬ್ಬವನ್ನು ಶ್ರೀಯುತ ಬಾಲಗಂಗಾಧರ ತಿಲಕ್ ಅವರು ಸ್ವತಂತ್ರ ಹೋರಾಟದ ಭಾಗವಾಗಿ ಗಣೇಶೋತ್ಸವವನ್ನು ಆಚರಣೆಯಲ್ಲಿ ತಂದರು.

ಈ ಉತ್ಸವದಲ್ಲಿ ಎಲ್ಲಾ ಸ್ವತಂತ್ರ ಹೋರಾಟಗಾರರು ಸೇರಿ ಗಣೇಶ್ ಉತ್ಸವವನ್ನು ಆಚರಣೆಯಲ್ಲಿ ತೊಡಗಿಕೊಂಡು ಬರ್ತಾ ಇರುತಕ್ಕಂತ ಸಂಪ್ರದಾಯ.ನಾವೆಲ್ಲ ಭಾರತೀಯರು ಈ ಗೌರಿ ಗಣೇಶ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಿಕೊಂಡು ಬರಬೇಕೆಂದು ಎಂದು ಪಿರಂಗಿ ಮಾತನಾಡಿದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!