ಸಿಂಧನೂರು : ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದದಿಂದ ಹೋಳಿ ಮತ್ತು ರಂಜಾನ್ ಹಬ್ಬವನ್ನು ಶಾಂತಿ ರೀತಿಯಿಂದ ಆಚರಿಸಿ ಒತ್ತಾಯಪೂರ್ವಕವಾಗಿ ಯಾರಿಗಾದರೂ ಬಣ್ಣ ಹಚ್ಚುವುದು ವಾಹನಗಳನ್ನು ತಡೆದು ಚಂದಾ ವಸೂಲಿ ಮಾಡುವುದು ಕಾನೂನು ವ್ಯವಸ್ಥೆಗೆ ವಿರುದ್ಧ ವಾದುದ್ದು ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ ಎಂದು ಸಿಪಿಐ ವಿನಾಯಕ್ ತಿಳಿಸಿದರು, ವಿವಿಧ ಸಮುದಾಯದ ಮುಖಂಡರು ಮತ್ತು ಸಂಘ ಸಂಸ್ಥೆಗಳೊಂದಿಗೆ ಶಾಂತಿ ಸಭೆ ನಡಸಿ ಬುಧವಾರ ನಗರದ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ನಡೆದ ಶಾಂತಿ ಪಾಲನೆ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ, ಜಿ.ಚಂದ್ರಶೇಖರ್ ಮೊದಲಿನಿಂದಲೂ ನಗರದಲ್ಲಿ ಹಿಂದೂ, ಮುಸ್ಲಿಂ ಭಾಂಧವರಲ್ಲಿ ಶಾಂತಿ ಸೌಹಾರ್ದತೆ ನೆನಸಿದ್ದು ಸಂತಸದ ವಿಷಯವಾಗಿದೆ ಹೋಳಿ ರಂಜಾನ್ ಎರಡು ಹಬ್ಬದಗಳು ಒಟ್ಟಿಗೆ ಇರುವುದರಿಂದ ಎರಡು ಸಮುದಾಯದ ಮುಖಂಡರು ಶಾಂತಿ ಸ್ವಹಾರ್ದತೆ ಕಾಪಾಡುವಲ್ಲಿ ಹೆಚ್ಚಿನ ನಿಗವಹಿಸಬೇಕಾಗಿದೆ ಕಾಮಣ್ಣನ ದಹನದ ಮಾಡುವರು ಸ್ಟೇಷನ್ ಗೆ ಬಂದು ಅನುಮತಿ ಪಡೆದುಕೊಳ್ಳಬೇಕಾಗಿದೆ ಈ ವೇಳೆ ಮಕ್ಕಳು ಬಗ್ಗೆ ಜಾಗೃತಿ ಇರಲಿ ಬಣ್ಣ ಆಡುವಾಗ ನೈಸರ್ಗಿಕ ಬಣ್ಣದ ಉಪಯೋಗವಿರಲಿ ಎಂದರು
ನಂತರ ಪಿ ಐ.ವೀರಾರೆಡ್ಡಿ ಮಾತನಾಡಿ ಯಾವುದೇ ಹಳೆ ವೈಶಮ್ಯ ಇಟ್ಟುಕೊಂಡು ಈ ಹಬ್ಬದಲ್ಲಿ ಕೋಮು ಗಲಭೆ ಸೃಷ್ಟಿಸಿದರೆ ನಗರದಾದ್ಯಂತ 125 ಹೆಚ್ಚು ಸಿಸಿ ಕ್ಯಾಮರಗಳು ಇರುವುದರಿಂದ ಕಿಡಿಗೇಡಿಗಳು ಏನೇ ಮಾಡಿದರು ಕ್ಯಾಮೆರಾದಲ್ಲಿ ಸರಿಯಾಗುತ್ತಾರೆ ಅಂತವರ ಮೇಲೆ ಕಾನೂಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ, ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ, ವಿನಾಯಕ್, ಪಿ ಐ, ವೀರಾರೆಡ್ಡಿ, ಪೊಲೀಸ್ ಸೋಮನಗೌಡ. ಮುಖಂಡರಾದ: ಆರುನ್ ಪಾಷಾ ಜಾಗಿರ್ದಾರ್. ಶಫಿ ಉಲ್ಲಾ ಖಾನ್. ಶರಣಪ್ಪ ತೆಂಗಿನಕಾಯಿ. ಹನುಮಂತ ಕರ್ನಿ. ಖಾಜಾ ಮಲ್ಲಿಕ್. ಬಾಬಾರ್ ಸಾಬ್. ದುರುಗೇಶ್ ಬಾಲಿ. ಜಲನಿ ಪಾಷಾ. ನೀಸಾರ್ ಖಾನ್. ಸಂಗಮೇಶ್ ಮುಳ್ಳೂರು. ಇನ್ನೂ ಅನೇಕರು ಉಪಸ್ಥಿತರಿದ್ದರು
ವರದಿ: ಬಸವರಾಜ ಬುಕ್ಕನಹಟ್ಟಿ




