Ad imageAd image

ನರೇಗಾ ಯೋಜನೆ ಮುಗಿಸಲು ಕೇಂದ್ರ ಸರ್ಕಾರ ಹೊರಟಿದೆ : ಪ್ರಿಯಾಂಕಾ ಗಾಂಧಿ 

Bharath Vaibhav
ನರೇಗಾ ಯೋಜನೆ ಮುಗಿಸಲು ಕೇಂದ್ರ ಸರ್ಕಾರ ಹೊರಟಿದೆ : ಪ್ರಿಯಾಂಕಾ ಗಾಂಧಿ 
WhatsApp Group Join Now
Telegram Group Join Now

ನವದೆಹಲಿ : ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸಂಸದರು ರೊಚ್ಚಿಗೆದ್ದು ಪ್ರತಿಭಟಿಸಿದ್ದು , ಮಲತಾಯಿ ಧೋರಣೆ ಸಹಿಸಲ್ಲ ಎಂದು ಎಚ್ಚರಿಸಿದ್ದಾರೆ. ನರೇಗಾ ಯೋಜನೆ ಸಂಬಂಧ ಕೇರಳಕ್ಕೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಂಸತ್ ಭವನದ ಮುಂಭಾಗ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಜಮಾಯಿಸಿದ ಸಂಸದರು ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಬಿಡುಗಡೆ ಮಾಡಬೇಕಿರುವ ಹಣವನ್ನು ಕೇರಳಕ್ಕೆ ಬಿಡುಗಡೆ ಮಾಡಿಲ್ಲ.ಆ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಸಂಸದರು ಕಿಡಿಕಾರಿದರು.

ಉದ್ಯೋಗ ಖಾತ್ರಿ ಯೋಜನೆಯನ್ನು ಮುಗಿಸಲು ಬಿಜೆಪಿ ಹೊರಟಿದೆ. ಕೇರಳದ ಯಾರೊಬ್ಬರಿಗೂ ಹಣ ಸಿಕ್ಕಿಲ್ಲ. ಯೋಜನೆಯನ್ನೇ ನಂಬಿದ್ದ ಜನರು ಕಂಗಾಲಾಗಿದ್ದಾರೆ ಎಂದು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article
error: Content is protected !!