Ad imageAd image
- Advertisement -  - Advertisement -  - Advertisement - 

ಎಂಯುಎನ್‌ದಲ್ಲಿ ವಿಜೇತರಿಗೆ ಬಹುಮಾನ

Bharath Vaibhav
ಎಂಯುಎನ್‌ದಲ್ಲಿ ವಿಜೇತರಿಗೆ ಬಹುಮಾನ
WhatsApp Group Join Now
Telegram Group Join Now

ಹುಬ್ಬಳ್ಳಿ:-ಧಾರವಾಡದ ಕೆಎಲ್‌ಇ ಶಾಲೆಯಲ್ಲಿ ಮಾರ್ಡನ್ ಯುನೈಟೆಡ್ ನೇಷನ್ಸ್ (ಎಂಯುಎನ್)ನ ಮುಕ್ತಾಯ ಸಮಾರಂಭ ನಡೆಯಿತು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಧಾರವಾಡ ಐಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಸುಭಾಷ ಮೆಹತೋ ಅವರು ಎಂಯುಎನ್‌ದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.

ಬಳಿಕ ಮಾತನಾಡಿ ಮೆಹತೋ ಅವರು, ಧಾರವಾಡದ ಕೆಎಲ್‌ಇ ಶಾಲೆಯ ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅನುವು ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಶ್ರದ್ಧೆ ಛಲ ದೃಢತೆಯಿಂದ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಇನ್ನೊಬ್ಬ ಮುಖ್ಯಅತಿಥಿ ಕರ್ನಾಟಕ ಮ್ಯಾಥಮೆಟಿಕ್ಸ್ ಫೋರಂನ ಉಪಾಧ್ಯಕ್ಷೆ ಲಕ್ಷ್ಮೀ ಹಿರೇಮಠ, ಪ್ರಾಚಾರ್ಯರಾದ ಡಾ.ಶುಭಾಂಗಿ ಮೋರೆ ಮಾತನಾಡಿದರು.ಸಮಾರಂಭದಲ್ಲಿ ಒಟ್ಟು ೧೨ ಶಾಲೆಗಳು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕೆಎಲ್‌ಇ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ:-ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
Share This Article
error: Content is protected !!