Ad imageAd image

ಮಾನ್ವಿ ಪಟ್ಟಣದ ಕೋನಾಪುರಪೇಟೆಯಲ್ಲಿ ಪ್ರತಿಭಟನೆ

Bharath Vaibhav
ಮಾನ್ವಿ ಪಟ್ಟಣದ ಕೋನಾಪುರಪೇಟೆಯಲ್ಲಿ ಪ್ರತಿಭಟನೆ
WhatsApp Group Join Now
Telegram Group Join Now

ಮಾನ್ವಿ ಪಟ್ಟಣದ ಕೋನಾಪುರಪೇಟೆಯಲ್ಲಿ ಹೆಚ್ಚಿದ ಟಿಪ್ಪರ್ ಗಳ ಹಾವಳಿ

ಧೂಳು ಮುಕ್ತ ಮಾಡುವಂತೆ ಕೋನಾಪುರ ಪೇಟೆಯ ನಿವಾಸಿಗಳಿಂದ ಪ್ರತಿಭಟನೆ

ಮರಳು ಟಿಪ್ಪರ್, ಕಂಕರ್ ಟಿಪ್ಪರ್ ಸಂಚಾರದಿಂದ ತೊಂದರೆ

ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಕೋನಾಪುರಪೇಟೆಯ ನಿವಾಸಿಗಳು

ಮಾನ್ವಿ : ಮಾನ್ವಿ ಪಟ್ಟಣದ ಕೋನಾಪುರ ಪೇಟೆಯ ಮಾರ್ಗದಲ್ಲಿ ಖನಿಜ ಸಂಪತ್ತು ಲೂಟಿ ಮಾಡುವ ಟಿಪ್ಪರ್ ಗಳ ಸಂಚಾರ ಹೆಚ್ಚಿದ್ದರಿಂದ ಧೂಳು ವಿಪರೀತವಾಗಿದ್ದು, ಸರಕಾರ ಕಾನೂನು ಕ್ರಮ ಕೈಗೊಂಡು ಧೂಳುಮುಕ್ತ ಮಾಡಬೇಕು ಎಂದು ಆಗ್ರಹಿಸಿ ಕೋನಾಪುರ ಪೇಟೆಯ ನಿವಾಸಿಗಳು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಕೋಮಾಪುರ ಪೇಟೆಯಿಂದ ಟಿಪ್ಪರ್ ಗಳ ಸಂಚಾರ ಜಾಸ್ತಿ ಇರುವ ಕಾರಣ ನಮಗೆ ತೊಂದರೆಯಾಗಿದೆ.ಹಾಗೆಯೇ ಧೂಳಿನಿಂದಾಗಿ ವೃದ್ಧರಿಗೆ ಹಾಗು ಮಕ್ಕಳಿಗೆ ಶ್ವಾಸಕೋಶದ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಮಾನ್ವಿ ಪಟ್ಟಣದ ಕೋನಾಪುರ ಪೇಟೆಯ ಮಾರ್ಗವಾಗಿ ಓವರ್ ಲೋಡ್ ಮೂಲಕ ಟಿಪ್ಪರ್ ಗಳು ಸಂಚಾರ ಮಾಡಿದರು ಸಹ ಮಾನ್ವಿ ಪೊಲೀಸ್ ನಿಲಾಖೆ, ರಾಯಚೂರು ಗಣಿ ಇಲಾಖೆ, ಮಾನ್ವಿ ತಹಸೀಲ್ದಾರ್, ಆರ್ ಟಿಒ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದ ಓವರ್ ಲೋಡ್ ಮಾಫಿಯಾ ದಂಧೆ ನಡೆಯುತ್ತಿದೆ ಎಂದು ಇದಕ್ಕೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!