ಮಲ್ಲಮ್ಮನ ಬೆಳವಡಿ :ದಿ. 17/08/2025 ಮಲ್ಲಮ್ಮನ ಬೆಳವಡಿಯಲ್ಲಿ ರಾಣಿ ಬೆಳವಡಿ ಮಲ್ಲಮ್ಮಳ ಹೊಸ ಕೃತಿಯನ್ನು ರಚಿಸಿದಂತ ಸಾಹಿತ್ಯಗಳಾದ Y N ನಾಗೇಶ್ ಕೌ oಡಿನ್ಯ ಅವರ ವಿರುದ್ಧವಾಗಿ ಪ್ರತಿಭಟನೆ ಮಾಡಲಾಯಿತು.

ಸಾಹಿತಿಗಳು ಬೆಳವಡಿ ಮಲ್ಲಮ್ಮಳ ಇತಿಹಾಸದ ಬಗ್ಗೆ ತಪ್ಪಾಗಿ ಕೃತಿ ರಚಿಸಿದ್ದು ಗ್ರಾಮಸ್ಥರಲ್ಲಿ ಆಕ್ರೋಶವನ್ನು ಮಾಡಿದೆ ಆದಷ್ಟು ಬೇಗನೆ ಆ ಕೃತಿಯನ್ನು ರದ್ದು ಮಾಡಿ ಸರಿಯಾದ ಇತಿಹಾಸವನ್ನು ಅರಿತುಕೊಂಡು ಹೊಸ ಕೃತಿಯನ್ನು ಬಿಡುಗಡೆ ಮಾಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರಯ್ಯ ಬ ಕಾರಿಮನಿ, ವೇದಮೂರ್ತಿ ಬಸಯ್ಯ ಸ್ವಾಮಿಗಳು ವಿರಕ್ತಮಠ ಸಮಾಜಸೇವಕ ಪ್ರಕಾಶ್ ಅಪ್ಪಣ್ಣಹುಂಬಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ರಾಚಪ್ಪ ಮಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವನಾಥ್ ಕರಿಕಟ್ಟಿ ಗಜಾನನ ರಾಣೋಜಿ ಪ್ರಕಾಶ್ ಕಾರಿಮನಿ ಬೆಳಕು ಸಂಸ್ಥೆಯ ಅಧ್ಯಕ್ಷ ಡಾ. ಡಿ ವೈ ಗರಗದ ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ್ ಗುಡ್ಡದಮಠ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ ಸವಿತಾ ಪಾಟೀಲ ರೋಹಿತ್ ಕುಲಕರ್ಣಿ ವೀರನಗೌಡ ಪಾಟೀಲ್ ಮುಂತಾದವರು ಭಾಗವಹಿಸಿದ್ದರು ಸಾಹಿತ್ಯಗಳಾದ ಯರು ಪಾಟೀಲ್ ಇವರು ಕೂಡ ಖಂಡಿಸಿದ್ದಾರೆ.
ವರದಿ: ದುಂಡಪ್ಪ ಹೂಲಿ




