ಸಿಂಧನೂರು : ನಗರದ ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ಸಾರ್ವಜನಿಕ ಕುರ್ ಆನ್ ಪ್ರವಚನ 2ನೇ ಮೇ 2025 ರಂದು ನೈತಿಕ ಮೌಲ್ಯಗಳು ಮತ್ತು ಸಮಾಜ 3ನೇ ಮೇ 2025 ರಂದು ಧರ್ಮ ಮತ್ತು ಮಾನವನ ಸಂಬಂಧಗಳು ಹಾಗೂ 4 ಮೇ 2025 ರಂದು ಜೀವನದ ಉದ್ದೇಶ ಎಂಬ ಸಾರ್ವಜನಿಕ ಪ್ರವಚನವನ್ನು ಮೂರು ದಿನಗಳ ಕಾಲ ಸಾಯಂಕಾಲ 7: 15 ರಿಂದ ರಾತ್ರಿ9:00 ಗಂಟೆವರೆಗೆ ನಗರದ ಆರ್ಜಿಎಂ. ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಪ್ರವಚನಕಾರರದ ಜನಾಬ್ ಮಹಮ್ಮದ ಕುಂ ಇ ರಾಜ್ಯ ಕಾರ್ಯದರ್ಶಿ ಜಮಾಹತೆ ಇಸ್ಲಾಮಿಯ ಹಿಂದ್ ಹಾಗೂ ವ್ಯವಸ್ಥಾಪಕರು ಶಾಂತಿ ಪ್ರಕಾಶನ ಮಂಗಳೂರು ಇವರು ಸಾರ್ವಜನಿಕ ಕುರ್ ಆನ್ ಪ್ರವಚನವನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದ ಸಾನಿಧ್ಯ ಮ ನಿ ಪ್ರ. ಸಿದ್ದಲಿಂಗ ಮಹಾಸ್ವಾಮಿ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿ. ಶ್ರೀ ಷ ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಖಾಸ ಶಾಖಾ ಮಠ ಕರಿ ಬಸವನಗರ ಹಾಗೂ ಶ್ರೀ ಸದ್ಗುರು ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ಹಾಗೂ ಅನೇಕ ಧರ್ಮ ಗುರುಗಳು ಭಾಗವಹಿಸಿದ್ದಾರೆ
ಸರ್ವ ಧರ್ಮೀಯ ಸ್ತ್ರೀ ಪುರುಷರೆಲ್ಲರಿಗೂ ಆಧಾರದ ಸುಸ್ವಾಗತ ಕೋರುವರು ಎಸ್. ಶರಣಗೌಡ ಅಧ್ಯಕ್ಷರು ಸ್ವಾಗತ ಸಮಿತಿ ಸಿಂಧನೂರು ಮಹಮ್ಮದ್ ಹುಸೇನ್ ಪ್ರಧಾನ ಸಂಚಾಲಕರು ಸ್ವಾಗತ ಸಮಿತಿ ಹಾಗೂ ಕೆ. ಜಲಾನಿಪಾಷ. ಬಾಬರ್ ಪಾಷ. ಅಲ್ಲಮಪ್ರಭು ಪೂಜಾರಿ. ಜಗದೀಶ್ ವಕೀಲರು. ಹನುಮಂತ ಪನ್ನೂರು. ಹನುಮಂತ ಕರ್ನಿ. ನಿರುಪಾದಿ ನಾಗಲಾಪುರ. ಹುಸೇನ್ ಸಾಬ್. ಮುನೀರ್ ಸಾಬ್. ಎಂ ಎಸ್ ಶ್ರೀನಿವಾಸ್ ಇನ್ನು ಅನೇಕರಿದ್ದರು.
ಬಸವರಾಜ ಬುಕ್ಕನಹಟ್ಟಿ. ಸಿಂಧನೂರು