
ಬೆಂಗಳೂರು: ಈ ಒಂದು ದೇವರ ಮೇಲೆ ನಂಬಿಕೆ ವಿಶ್ವಾಸ ಶ್ರದ್ದೆಯಿಂದ ಭಕ್ತಿ ಸಲ್ಲಿಸಿದರೆ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗುತ್ತವೆ ಎಂದು ಕಾವರನಹಳ್ಳಿ ಬೆಟ್ಟಪ್ಪ ರಾವಣ್ ಹೇಳಿದರು.
ಅವರು ಕಾವರನಹಳ್ಳಿ, ಐತಾಂಡಹಳ್ಳಿ ನೆರ್ನಹಳ್ಳಿ ಗ್ರಾಂ ಕಸಬ ಹೋಬಳಿ ಬಂಗಾರಪೇಟೆ ತಾಲ್ಲೂಕು ಕೋಲಾರ ಜಿಲ್ಲೆಯಲ್ಲಿ ಶ್ರೀ ನವಪಾಶರಣ ಅಭಯಹಸ್ತ ಆಂಜನೇಯ ಸ್ವಾಮಿ ಪ್ರಸನ್ನ ಟ್ರಸ್ಟ್ ನವಪಾಶರಣ ಎಂದರೆ 9 ವಿಧದ ವಿಷ ಬೆರೆಸಿ ವಿಗ್ರಹ ಮಾಡಿಸಿ ಅದರಿಂದ ಬರುವ ಒಳ್ಳೆಯ ರಸವನ್ನ ಅಮೃತ ಗೊಳಿಸಿ ಅಭಿಷೇಕದ ನೀರನ್ನು ಪ್ರತಿ ಹುಣ್ಣಿಮೆ ದಿವಸ ಭಕ್ತಾದಿಗಳ ತೀರ್ಥ ಸ್ಥಾನ ಮಾಡಿಸಿ ಈ ನವಪಾಸರಣ ತೀರ್ಥದಿಂದ ಆರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ ಮತ್ತು ಯಾವುದೇ ತರಹ ಕಷ್ಟ ಕಾರ್ಖಾನೆಗಳು ಇಲ್ಲದೆ ಮನಸ್ಸಿಗೆ ಒಳ್ಳೆಯ ನೆಮ್ಮದಿ ಶಾಂತಿ ಸುಖ ಬರಲು ಅನುಕೂಲ ಮಾಡಿಕೊಡುತ್ತದೆ ಯಾವುದೇ ತರಹ ಭೀತಿ ಭಯ ಕಷ್ಟವಾದೆ ಮಾನಸಿಕ ಒತ್ತಡ ಏನೇ ಇದ್ದರೂ ಶಾಶ್ವತ ಪರಿಹಾರ ಈ ತೀರ್ಥದಿಂದ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗುತ್ತದೆ ಎಂದು ಸಾರ್ವಜನಿಕರಿಗೆ ಉದ್ದೇಶಿಸಿ ಬೆಟ್ಟಪ್ಪ ರಾವಣ್ ಮಾತನಾಡಿದರು.

ಶಿವ ಮುನೇಶ್ವರ ಮಹಾ ಸ್ವಾಮಿಜಿಗಳು ಪೀಠಾಧಿಪತಿ ಪುಣ್ಯ ಕ್ಷೇತ್ರ ಇವರು ಗುದ್ದಲಿ ಪೂಜೆಯ ಸಾನಿಧ್ಯವಹಿಸಿದರು. ಶ್ರೀ ರವಿ ಕುಮಾರ್ ಅರ್ಥ ವರ್ಣ ಕ್ಷೇತ್ರದ ಸಂಸ್ಥಾಪಕರು ಕಾಳಿ ಕಾವೇರಿ ಆರಾಧಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಗ್ರ ಮಧುಸೂದನ್, ಪುರಸಭೆ ಸದಸ್ಯರಾದ ಕಪಳಿ ಶಂಕರ್, ಸುನಿಲ್ ಕುಮಾರ್ , ಮುಖಂಡರಾದ ಉಪಾಸಲ್ದಾರ್ ರಾಮಚಂದ್ರಪ್ಪ, ಮುನಿಸ್ವಾಮಿ, ನಾರಾಯಣಸ್ವಾಮಿ, ನಾಗರಾಜ್ ಇಂಜಿನಿಯರ್, ಮೈಸೂರ್ ದೇವರಾಜ್, ಶಿವಾರ ಪಟ್ನಾ ಶಿಲ್ಪಿ ಮುನಿರಾಜ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಮಹಿಳೆಯರು ಸಮಸ್ತ ನಾಗರಿಕರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




