ಬೆಂಗಳೂರು: ನಗರದ ರಾಜಾಜಿನಗರ ವ್ಯಾಪ್ತಿಗೆ ಬರುವ ಸುಬ್ರಹ್ಮಣ್ಯ ನಗರದಲ್ಲಿ ಸ್ಲಾರ್ಕ್ ಮಾನಸಿಕ ಅಧ್ಯಯನ ಕೇಂದ್ರವನ್ನು ತತ್ವ ಶಾಸ್ತ್ರಜ್ಞರು ಹಾಗೂ ಕೇಂದ್ರ ಮುಖ್ಯಸ್ಥ ರವೀಂದ್ರ ನಾಯಕ ಅವರು ಮತ್ತು ಕುಟುಂಬ ಸದಸ್ಯರು ಅಭಿಮಾನಿಗಳ ಸಮ್ಮುಖದಲ್ಲಿ ರಿಬ್ಬನ್ ಕತ್ತರಿಸಿ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು ಈಗಿನ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ಹಲವಾರು ರೋಗಿಗಳು ದಿನದಿಂದ ದಿನಕ್ಕೆ ಮಾನಸಿಕವಾಗಿ ಚಿಂತನೆಗಳು ಮತ್ತು ಒತ್ತಡದಿಂದ ಮನುಷ್ಯನ ಬದುಕಿಗೆ ನಾನಾ ರೀತಿಯ ಬೇಕಾಗುವ ಚಟುವಟಿಕೆ ಮತ್ತು ತರಬೇತಿ ನೀಡುವ ಕೇಂದ್ರದ ಮುಖ್ಯ ಉದ್ದೇಶವಾಗಿದೆ. “ಕೇಂದ್ರದ ಕಾರ್ಯ ಸೂಚಿ” ನಿಮ್ಮ ವ್ಯಕ್ತಿತ್ವ ನಿಮ್ಮಿಂದಲೆ, ಉಪನಯ ಕಾರ್ಯ ಕ್ರಮಗಳು, ಮನುಷ್ಯನ ಮತ್ತು ಜಾಗ್ರತೆ ಮನೋನಿಗ್ರಹ ಅತೀಂದ್ರಿಯ ವಿದ್ಯಮಾನಗಳು, ಕನಸುಗಳು ಮತ್ತು ಪುನರ್ಜನ್ಮ, ಧ್ಯಾನ ದಲ್ಲೋಂದು ಧ್ಯಾನ, ಆತ್ಮಕ್ಕೆ ನೆಮ್ಮದಿ ನೀಡುತ್ತದೆ ಎಂದು ಕೇಂದ್ರ ಮುಖ್ಯಸ್ಥ ರವೀಂದ್ರ ನಾಯಕ ಮಾದ್ಯಮದವರ ಜೊತೆಗೆ ತಮ್ಮ ಅನುಭವ ಹಂಚಿಕೊಂಡರು.
ಇದೆ ವೇಳೆ ಮಿನಾಕ್ಷಿ ಆರ್. ನಾಯಕ, ಲತಾ ಸತೀಶ್ ಸೇರಿದಂತೆ ಮುಂತಾದವರು ಈ ಕೇಂದ್ರ ಬಗ್ಗೆ ಒಳ್ಳೆಯ ಅಭಿಪ್ರಾಯದ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಲಾರ್ಕ್ ಮಾನಸಿಕ ಅಧ್ಯಯನ ಕೇಂದ್ರ ವ್ಯವಸ್ಥಾಪಕರು, ಸದಸ್ಯರು ಪದಾಧಿಕಾರಿಗಳು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್