ಬೆಳಗಾವಿ : ಯುವತಿಯನ್ನು ಚುಡಾಯಿಸಿದಕ್ಕೆ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ನಡೆದಿದೆ.ಬೈಕ್ ನಲ್ಲಿ ವಿಠಲ ನಾಯ್ಕರ್ (39) ಎನ್ನುವ ವ್ಯಕ್ತಿಯನ್ನು ಅಪಹರಿಸಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಗ್ಯಾಸ್ ಪೈಪ್ ಮತ್ತು ಹಗ್ಗದಿಂದ ದುಷ್ಕರ್ಮಿಗಳ ಗ್ಯಾಂಗ್ ಹಿಗ್ಗಾಮುಗ್ಗ ಥಳಿಸಿದೆ. ಘಟನೆ ಕುರಿತಂತೆ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.




