Ad imageAd image
- Advertisement -  - Advertisement -  - Advertisement - 

ಶಾಲೆಗಳು, ಉದ್ಯಾನಗಳಲ್ಲಿ ಮದ್ಯ ಸೇವಿಸಿದ್ರೆ ಕಠಿಣ ಕ್ರಮ : ಆ‌ರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆ 

Bharath Vaibhav
ಶಾಲೆಗಳು, ಉದ್ಯಾನಗಳಲ್ಲಿ ಮದ್ಯ ಸೇವಿಸಿದ್ರೆ ಕಠಿಣ ಕ್ರಮ : ಆ‌ರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆ 
WhatsApp Group Join Now
Telegram Group Join Now

ಬೀದರ್ : ಮದ್ಯ ಪ್ರಿಯರೇ ಎಚ್ಚರ. ಇನ್ಮುಂದೆ ರಾಜ್ಯದ ಶಾಲೆಗಳು, ಉದ್ಯಾನಗಳಲ್ಲಿ ಮದ್ಯ ಸೇವಿಸಿದ್ರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಆ‌ರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಶಾಲೆಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಯಾರಾದ್ರೂ ಮದ್ಯ ಸೇವಿಸಿವುದು ಕಂಡು ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಶಾಲೆಯ ಸುತ್ತ ಮದ್ಯ ಮಾರಾಟ ಕುರಿತ ಮಕ್ಕಳು ಮನವಿ ಸಲ್ಲಿಸಿದ್ದಾರೆ. ಕ್ರಮಕ್ಕೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗಾರ್ಡನ್ ಇರುವುದು ವಾಯು ವಿಹಾರಕ್ಕೆ ಮಾತ್ರ. ಇಲ್ಲಿ ಮದ್ಯ ಸೇವನೆ ಮಾಡುವುದರಿಂದ ಅಲ್ಲಿನ ವಾತಾವರಣ ಕಲುಷಿತವಾಗುತ್ತಿದೆ. ಇದು ಸಾರ್ವಜನಿಕವಾದ ಸ್ಥಳವಾಗಿದ್ದು, ಅದರ ಪವಿತ್ರತೆಯನ್ನು ಕಾಯ್ದುಕೊಳ್ಳುವುದು ಎಲ್ಲ ಜವಾಬ್ದಾರಿ. ಮದ್ಯ ಕುಡಿಯುವುದು ಗಮನಕ್ಕೆ ಬಂದರೆ‌ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!