Ad imageAd image

ಭಾರತ-ಪಾಕ್‌ ಸಂಘರ್ಷದಿಂದ ಆರ್ಥಿಕತೆಗೆ ಪೆಟ್ಟುಬಿದ್ದಿಲ್ಲ: ಆರ್‌ಬಿಐ ಗವರ್ನರ್

Bharath Vaibhav
ಭಾರತ-ಪಾಕ್‌ ಸಂಘರ್ಷದಿಂದ ಆರ್ಥಿಕತೆಗೆ ಪೆಟ್ಟುಬಿದ್ದಿಲ್ಲ: ಆರ್‌ಬಿಐ ಗವರ್ನರ್
WhatsApp Group Join Now
Telegram Group Join Now

ಮುಂಬೈ: ಪಹಲ್ಯಾಮ್ ಭಯೋತ್ಪಾದಕ ದಾಳಿಯ ನಂತರದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ ದೇಶದ ಆರ್ಥಿಕತೆಗೆ ಯಾವುದೇ ಪಟ್ಟುಬಿದ್ದಿಲ್ಲ ಎಂದು ಶುಕ್ರವಾರ ಆರ್‌ಬಿಐ ಗವರ್ನರ್ ಸಂಜಯ್ ಮಲೋತ್ರಾ ಹೇಳಿದ್ದಾರೆ.

ಈ ಸಂಘರ್ಷವು ಆರ್ಥಿಕತೆಯ ಮೇಲೆ ಅತಿ ಕಡಿಮೆ ಪ್ರಮಾಣದ ಪರಿಣಾಮವನ್ನ ಉಂಟುಮಾಡಿದೆ.
ಉತ್ತರ ಭಾರತದ ಹಲವೆಡೆ ವಿಮಾನಯಾನ ಕುಂಟಿತಗೊಂಡಿದ್ದರಿಂದ ಕೆಲವು ದಿನಗಳ ಕಾಲ ಆರ್ಥಿಕತೆಯ ಮೇಲೆ ಅದರ ಹೊಡೆತ ಬಿದ್ದಿತ್ತು. ಆದರೆ ಅದರಿಂದ ಯಾವುದೇ ದೊಡ್ಡ ಪುಮಾಣದ ನಷ್ಟವಾಗಿಲ್ಲ
ಎಂದರು.

ಸಂಘರ್ಷದ ತೀವ್ರತೆಯಿದ್ದ ಕೆಲವು ದಿನಗಳ ಕಾಲ ಆ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗಿತ್ತಾದರೂ, ಇದೀಗ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್, ‘ಕೋವಿಡ್ ಇದೀಗ ಕೇವಲ ಒಂದು ವೈರಾಣುವಷ್ಟೇ.ಅದು ಹಾಗೆ ಇರುತ್ತದೆ ಎಂದು ಆಶಿಸುತ್ತೇನೆ’ ಎಂದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!