Ad imageAd image

ವಿಶ್ರಾಂತ ನ್ಯಾಯಮೂರ್ತಿ, ನಾಡೋಜ ಎಸ್.ಆರ್. ನಾಯಕ್ ವಿಧಿವಶ 

Bharath Vaibhav
ವಿಶ್ರಾಂತ ನ್ಯಾಯಮೂರ್ತಿ, ನಾಡೋಜ ಎಸ್.ಆರ್. ನಾಯಕ್ ವಿಧಿವಶ 
WhatsApp Group Join Now
Telegram Group Join Now

ಬೆಂಗಳೂರು: ವಿಶ್ರಾಂತ ನ್ಯಾಯಮೂರ್ತಿ ಎಸ್.ಆರ್. ನಾಯಕ್(80) ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಛತ್ತಿಸ್ಗಢದ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಕಾರ್ಯನಿರ್ವಹಿಸಿದ್ದರು.

ಪತ್ನಿ ಶಾಲಿನಿ ಎಸ್. ನಾಯಕ್, ಪುತ್ರ ಡಾ. ರಾಹುಲ್, ಪುತ್ರಿ ನಿಶಾ ಗಾಂವ್ಕರ್ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಎಸ್.ಆರ್. ನಾಯಕ್ ಭಾಜನರಾಗಿದ್ದರು. ಸೋಮವಾರ ಸಂಜೆ ಹೆಬ್ಬಾಳದ ಚಿತಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!