Ad imageAd image

ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು : ಬಿಜೆಪಿ ಪ್ರತಿಭಟನೆಗೆ ಎಂ.ಬಿ ಪಾಟೀಲ್ ವ್ಯಂಗ್ಯ 

Bharath Vaibhav
ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು : ಬಿಜೆಪಿ ಪ್ರತಿಭಟನೆಗೆ ಎಂ.ಬಿ ಪಾಟೀಲ್ ವ್ಯಂಗ್ಯ 
MB PATIL
WhatsApp Group Join Now
Telegram Group Join Now

ಬೆಂಗಳೂರು : ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು’ ಎಂದು ಬಿಜೆಪಿ ಪ್ರತಿಭಟನೆಗೆ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.ತೈಲಬೆಲೆ ಏರಿಕೆ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಸೈಕಲ್ ಸೈಕಲ್‌ ಜಾಥಾಗೆ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

”ಮೋದಿಯವರು ಪ್ರಧಾನಿಯಾಗಿದ್ದಾಗ ಬಿಜೆಪಿ ಸರ್ಕಾರ ಪೆಟ್ರೋಲ್ ಬೆಲೆಯನ್ನು ರೂ. 38, ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು ರೂ. 500 ಹೆಚ್ಚಿಸಿದ್ದರು.

ಆಗ ರಾಜ್ಯ ಬಿಜೆಪಿ ನಾಯಕರೇಕೆ ಪ್ರತಿಭಟನೆ ಮಾಡಲಿಲ್ಲ?!. ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರು ಕೂಡ ಲೋಕಸಭೆಯಲ್ಲಿ ಬಾಯಿ ತೆಗೆಯಲೇ ಇಲ್ಲ. ಈಗ ರೂ. 3ಹೆಚ್ಚಿಸಿರುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಏರಿಕೆಯ ನಂತರವೂ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಕಡಿಮೆಯೇ ಇದೆ. ಈಗ ರಾಜ್ಯ ಬಿಜೆಪಿ ನಾಯಕರು ಸೈಕಲ್ ಹೊಡೆದು ಪ್ರತಿಭಟಿಸುವರಂತೆ! ಸೈಕಲ್ ತುಳಿಯಲಿ… ಆರೋಗ್ಯಕ್ಕೆ ಒಳ್ಳೆಯದು!” ಎಂದು ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!