Ad imageAd image

ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ ಇದೆ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ.

Bharath Vaibhav
vinay kulkarni
WhatsApp Group Join Now
Telegram Group Join Now

ಧಾರವಾಡ :-  ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನನ್ನ ಆಪ್ತರು, ಮಹಾನಗರ ಪಾಲಿಕೆ ಸದಸ್ಯರು ಆದ ಶ್ರೀ ನಿರಂಜನ ಹಿರೇಮಠ ಅವರ ಪುತ್ರಿಯ ಕೊಲೆ ನನಗೆ ಆಘಾತ ತರಸಿದ್ದು,ಈ ಒಂದು ಕೃತ್ಯ ನಮ್ಮ ಸರಕಾರ ಸಹಿಸುವದಿಲ್ಲ ಯಾವುದೆ ಕಾರಣಕ್ಕೂ ತಪ್ಪಿತರ ವಿರುದ್ಧ ಕಠಿಣ ಕ್ರಮಕ್ಕೆ ಸಹಕಾರವಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ,ಅವರಗೆ ಕಠಿಣ ಕಾನೂನು ಕ್ರಮ ಕೈಗೊಂಡು ಅವರಿಗೆ ತಕ್ಕ ಪಾಠ ಕಲಿಸಬೇಕು.

ಆ ಯುವತಿಯ ಕುಟುಂಬಕ್ಕೆ ನ್ಯಾಯ ಸಿಗಲಿ, ಈ ತರಹದ ಅನ್ಯಾಯಕ್ಕೆ ತಪ್ಪಿಸ್ತರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯ, ಹಾಗೂ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ ಇದೆ ಈ ತನಿಖೆಗೆ ಹಿಂದೇಟು ಹಾಕುವಂತಿಲ್ಲ ಎಂದು ಹೇಳಿದ್ದಾರೆ.

ಮೃತ ವಿದ್ಯಾರ್ಥಿನಿಯ ಪೋಷಕರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ, ಆ ನೋವಿನಲ್ಲಿ ನಾನು ಕೂಡ ಬಾಗಿಯಾಗಿರುತ್ತೇನೆ ಎಂದರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
Share This Article
error: Content is protected !!