Ad imageAd image

ಜಿಕೆಡಬ್ಲ್ಯೂ ಲೇಔಟದಲ್ಲಿ ಸ್ಯಾನಿಟರಿ ಕಾಮಗಾರಿಗೆ ಚಾಲನೆ :ಶಾಸಕ ಎಸ್ ಮುನಿರಾಜು

Bharath Vaibhav
ಜಿಕೆಡಬ್ಲ್ಯೂ ಲೇಔಟದಲ್ಲಿ ಸ್ಯಾನಿಟರಿ ಕಾಮಗಾರಿಗೆ ಚಾಲನೆ :ಶಾಸಕ ಎಸ್ ಮುನಿರಾಜು
WhatsApp Group Join Now
Telegram Group Join Now

ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಜಿಕೆಡಬ್ಲ್ಯೂ ಲೇಔಟ್ ವೃತ್ತದಲ್ಲಿ ಒಳಚರಂಡಿ ಕಾಮಗಾರಿಗೆ ಶಾಸಕ ಎಸ್ ಮುನಿರಾಜು ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ನಂತರ ಅವರು ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳು ಚಾಲ್ತಿ ಇವೆ ಕೆಲವು ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ ಅದರಲ್ಲಿ ರಸ್ತೆ ಡಾಂಬರೀಕರಣ, ಶಾಲಾಕೊಠಡಿಗಳು, ಬಸ್ ತಂಗಾಣುಗಳು, ಮತ್ತು ಪಾರ್ಕ್ ಅಭಿವೃದ್ಧಿ ಹೀಗೆ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಿಂದೆ ಎರಡು ಬಾರಿ ಶಾಸಕನಾಗಿದ್ದಾಗ ಇಡೀ ದಾಸರಹಳ್ಳಿ ಕ್ಷೇತ್ರದಲ್ಲಿ ರಸ್ತೆ ಒಳಚರಂಡಿ ಉದ್ಯಾನವನ ಶಾಲೆ ಕೊಠಡಿಗಳು ಅಂಗನವಾಡಿ ನೀರಿನ ವ್ಯವಸ್ಥೆ, ಬೀದಿ ದೀಪಗಳು ಮತದಾರರು, ನಮ್ಮ ಮುಖಂಡರು ಹೇಳಿದ ಕೆಲಸ ಮಾಡಿದ್ದೇನೆ.

ಮತ್ತು ಮೂರನೇ ಬಾರಿಗೆ ನನ್ನ ಕ್ಷೇತ್ರದ ಮತದಾರರು ಶಾಸಕನಾಗಿ ಮಾಡಿದ್ದಾರೆ ಅವರ ಋಣ ತೀರಿಸಲು ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ನಾನು ಸುಳ್ಳು ಹೇಳಿ ಕೊಂಡು ಐದು ವರ್ಷ ಕಾಲ ಕಳೆಯುವ ಶಾಸಕ ನಾನಲ್ಲಾ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ಎಸ್ ಮುನಿರಾಜು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳವಾಟರ್, ಮಾಜಿ ಅಧ್ಯಕ್ಷ ಹರೀಶ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡಿನ ಬಿಜೆಪಿ ಮುಖಂಡ ಮಂಡ್ಯ ರವಿ, ಜೆಡಿಎಸ್ ಹಿರಿಯ ಮುಖಂಡ ನಂಜುಂಡಪ್ಪ ಅವರ ಸುಪುತ್ರಿ ಪ್ರೇಮಾ ನಂಜುಂಡಪ್ಪ, ಗಂಗಣ್ಣ, ದಿನೇಶ್, ಕಂಪ್ಯೂಟರ್ ವಿಜಯ ಕುಮಾರ್, ಐಪಿನಗರದ ಯುವ ಮುಖಂಡ ಲೋಕೇಶ್ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!