Ad imageAd image

ಶ್ರೀ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಅಮವಾಸೆ ನಿಮಿತ್ತ ಅನ್ನದಾಸೋಹ

Bharath Vaibhav
ಶ್ರೀ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಅಮವಾಸೆ ನಿಮಿತ್ತ ಅನ್ನದಾಸೋಹ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ 16ನೇ ವಾರ್ಡಿನಲ್ಲಿರುವ ಶ್ರೀ ಉರುಕುಂದಿ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಅವರಾತ್ರಿ ಅಮವಾಸ್ಯೆ ನಿಮಿತ್ತ ಪಾರ್ವತಿ ಬಸವ, ಮಲ್ಲೇಶ್ವರಿ ರಾಘವೇಂದ್ರ ಕುಟುಂಬಗಳಿಂದ ಅನ್ನ ದಾಸೋಹ ನೆರವೇರಿತು.
ಬಾದಾಮಿ ಅಮವಾಸ್ಯೆ ನಿಮಿತ್ತ ದೇವಸ್ಥಾನದಲ್ಲಿ ಪಂಚಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಮಹಾಮಂಗಳಾರತಿ, ಹಾಗೂ ಪಲ್ಲಕ್ಕಿ ಸೇವೆ ಜರುಗಿದ್ದು, ಹಲವಾರು ಭಕ್ತರು ಭಾಗಿಯಾಗಿ ದೇವರ ಹರಕೆ ತೀರಿಸಿದರು.
ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ಸುರೇಶರೆಡ್ಡಿ ಅವರು ಮಾತನಾಡಿ ಪ್ರತಿ ಅಮವಾಸ್ಯೆಯು ಇಲ್ಲಿ ದಾನಿಗಳ ನೆರವಿನಿಂದ ಅನ್ನದಾಸೋಹ ಜರುಗುತ್ತದೆ.

ಒಂದು ವೇಳೆ ದಾನಿಗಳು ಇಲ್ಲದಿದ್ದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ದಾಸೋಹ ನಡೆಯುತ್ತದೆಂದರು.

ದಾಸೋಹ ದಾನಿಗಳು ಮಾತನಾಡಿ ಈ ಸ್ವಾಮಿಯ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಒಳಿತಾಗಿರುತ್ತದೆ. ಇಂದು ನಮ್ಮ ಕುಟುಂಬ ಸಮೇತ ಬಂದು ಪಲ್ಲಕ್ಕಿ ಸೇವೆ, ದಾಸೋಹ ಸೇವೆ ಮಾಡಿರುವುದಾಗಿ ತಿಳಿಸಿದರು.
ಅಪಾರ ಭಕ್ತವೃಂದವನ್ನು ಹೊಂದಿರುವ ಶ್ರೀ ಈರಣ್ಣ ಸ್ವಾಮಿಯ ಸೇವೆಗೈಯಲೆಂದು ನಗರದ ವಿವಿಧ ವಾರ್ಡ್ ಗಳಿಂದ ಬಂದು ತಮ್ಮ ಕೈಲಾದ ಸೇವೆಯಲ್ಲಿ ಭಾಗಿಯಾಗುತ್ತಾರೆ.
ಯಾರಾದರೂ ಮುಂದಿನ ಅಮವಾಸ್ಯೆಗೆ ದಾಸೋಹ ಮಾಡುವ ಇಚ್ಚೆಯುಳ್ಳ ಭಕ್ತರು ಮೊದಲೇ ತಿಳಿಸಿದಲ್ಲಿ ಅವರ ಸೇವೆಗೆ ಅನುವು ಮಾಡಿಕೊಡಲಾಗುವುದೆಂದು ಆರ್ಚಕ ಶರಣಯ್ಯಸ್ವಾಮಿ ತಿಳಿಸಿದರು.
ಇದೇ ವೇಳೆ ದೇವಸ್ಥಾನ ಟ್ರಸ್ಟಿನ ಉಪಾಧ್ಯಕ್ಷ ವೀರೇಶ ನಾಯಕ, ಹಿರಿಯ ಮುಖಂಡರಾದ ನಾಗಯ್ಯ ಸ್ವಾಮಿ, ಸುಂಕಪ್ಪ, ಪ್ರಕಾಶ ಹಾಗೂ ಇನ್ನಿತರ ಭಕ್ತರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!