Ad imageAd image

ಪತ್ರಕರ್ತ ಸೈಯದ್ ಸಿರಾಜ್ ಖಾಜಿ ಅವರಿಗೆ “ಸಾಮ್ರಾಟ್ ಅಶೋಕ” ಪ್ರಶಸ್ತಿ

Bharath Vaibhav
ಪತ್ರಕರ್ತ ಸೈಯದ್ ಸಿರಾಜ್ ಖಾಜಿ ಅವರಿಗೆ “ಸಾಮ್ರಾಟ್ ಅಶೋಕ” ಪ್ರಶಸ್ತಿ
WhatsApp Group Join Now
Telegram Group Join Now

ಇಲಕಲ್ :-  ನಗರದ ಪತ್ರಕರ್ತ ಸೈಯದ್ ಸಿರಾಜ್ ಖಾಜಿ ಅವರಿಗೆ “ಸಾಮ್ರಾಟ್ ಅಶೋಕ” ಪ್ರಶಸ್ತಿಯನ್ನ ಅಕ್ಟೋಬರ್ 27 ಮಸ್ಕಿ ನಗರದ ನ್ಯೂ ಫಂಕ್ಷನ್ ಹಾಲ್ ನಲ್ಲಿ ನಡೆದ ಸರ್ವಧರ್ಮ ಜೈ ಭೀಮ್ ಮಾನವ ವೇದಿಕೆ ಹೂ ಅಲ್ ಶಿಫಾಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್ (ರಿ) ಆಶ್ರಯದಲ್ಲಿ ಡಾ. ಜಲಾಲುದ್ದೀನ್ ಅಕ್ಬರ್ ಟ್ರಸ್ಟ್ ಅಧ್ಯಕ್ಷರು ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆ ಸಂಪಾದಕರು ಲಿಂಗಸುಗೂರು ಅವರ ನೇತೃತ್ವದಲ್ಲಿ ಹಾಗೂ ಮುಖ್ಯ ಅತಿಥಿಗಳಾದ ಬಂಗ್ಲೆ ಮಲ್ಲಿಕಾರ್ಜುನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಹಾಗು ಡಾ. ಬಸವರಾಜ ಗವಿಮಠ ಇಲಕಲ್ ಸಾಹಿತಿ ಹಾಗೂ ಮಾಜಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಆರ್‌.ಎನ್.ಐ.ಪತ್ರಕರ್ತರ 7ನೇ ಸಮಾವೇಶದಲ್ಲಿ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆಯಿಂದ ಕೊಡಮಾಡುವ 2024 ನೇ ಸಾಲಿನ “ಸಾಮ್ರಾಟ್ ಅಶೋಕ” ಪ್ರಶಸ್ತಿಯನ್ನು ಶರಣ ಸೈಯದ್ ಸಿರಾಜ್ ಖಾಜಿ ಇವರು ಮಾಡಿದ ಸಮಾಜ ಸೇವೆ ಹಾಗೂ ಪತ್ರಿಕಾ ಸೇವೆ ಹಾಗೂ ಗಣನೀಯ ಜನಕಲ್ಯಾಣಸೇವೆಯನ್ನು ಗುರುತಿಸಿ ” ಸಾಮ್ರಾಟ್ ಅಶೋಕ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇವರನ್ನು ಕ್ಷೇತ್ರದ ಹಾಗೂ ನಾಡಿನ ಗಣ್ಯಮಾನ್ಯರ ಸಮ್ಮುಖದಲ್ಲಿ ಸನ್ಮಾನಿಸಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನಮಾಡಿ ಗೌರವಗಳೊಂದಿಗೆ ಪ್ರಶಸ್ತಿ ಪತ್ರ ನೀಡಲಾಗಿದೆ.

 

ಪ್ರಶಸ್ತಿ ಪಡೆದ ಸೈಯದ್ ಸಿರಾಜ್ ಖಾಜಿಯವರಿಗೆ ಇಳಕಲ್ ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಸಿಸಿ ಚಂದ್ರಪಟ್ಟಣ, ಇಲಕಲ್ ನಗರದ ಹಿರಿಯ ಪತ್ರಕರ್ತರು ಬಿ ಬಾಬು ಹಾಗು ಉದಯ ಕಾಲ ಪತ್ರಿಕೆಯ ವರದಿಗಾರ ಶರಣಗೌಡ ಕಂದಕೊರ, ಮಾಧ್ಯಮ ಮಿತ್ರ ಸಚಿನ ಸಾಲಿಮಠ, ಗುಮ್ಮಟನಗರಿ ಪತ್ರಿಕೆಯ ವರದಿಗಾರ ಮೆಹಬೋಬ ದೋಟಿಹಾಳ, ಅಂಜುಮನ್ ಸಂಸ್ಥೆ ನಿರ್ದೇಶಕ ರಫೀಕ್ ಐಹೊಳ್ಳಿ, ಯುವ ನೇತಾರ ಅಬ್ದುಲ್ ರೆಹಮಾನ ಕರಡಿ, ಸಾಮಾಜಿಕ ಹೋರಾಟಗಾರ ವ್ಯಾಪಾರಸ್ಥ ಹಾಗು ಯುವ ಮುಖಂಡ ಕಾಸಿಮ ಅಲಿ ಶಾ ಮಕಾನದಾರ, ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಗವಾನ, ಯುವ ನಾಯಕ ಅಬೂಬಕ್ಕರ್ ಬಾದಾಮಿ, ದೃಶ್ಯ ಮಾಧ್ಯಮ ಮಿತ್ರ ದಾವಲ್ ಸೇಡಂ ಶುಭಾಶಯ ಕೋರಿದ್ದಾರೆ..

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!