Ad imageAd image
- Advertisement -  - Advertisement -  - Advertisement - 

ಶರಣ ಪರಿಷತ್ತಿನ ಅಧ್ಯಕ್ಷರ ಹುಟ್ಟುಹಬ್ಬ ನಿಮಿತ್ಯ-ಸಸಿ ನೆಡುವ ಕಾರ್ಯಕ್ರಮ

Bharath Vaibhav
ಶರಣ ಪರಿಷತ್ತಿನ ಅಧ್ಯಕ್ಷರ ಹುಟ್ಟುಹಬ್ಬ ನಿಮಿತ್ಯ-ಸಸಿ ನೆಡುವ ಕಾರ್ಯಕ್ರಮ
WhatsApp Group Join Now
Telegram Group Join Now

ಯಾದಗಿರಿ:- ಜಿಲ್ಲೆಯ ಸುರಪೂರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರು ,ನಿವೃತ್ತ ಜಿಲ್ಲಾಧಿಕಾರಿಗಳಾದ ಡಾ. ಸಿ ಸೋಮಶೇಖರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಯುವ ಘಟಕದ ವತಿಯಿಂದ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಸಸಿ ನೆಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿ ಶುಭ

ಕೋರಲಾಯಿತು, ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ರಾಜ್ಯ ಪ್ರತಿನಿಧಿ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ ಡಾ ಸಿ. ಸೋಮಶೇಖರ್ ಅವರು ಜಿಲ್ಲಾಧಿಕಾರಿಗಳಾಗಿ, ಸರ್ಕಾರದ ಹಲವು ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ ಅಖಿಲ ಭಾರತ ಶರಣ ಸಾಹಿತ್ಯ

ಪರಿಷತ್ತಿನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಶರಣಪರಿಷತ್ತನ್ನು ಸಂಘಟಿಸುತ್ತಿದ್ದಾರೆ, ಪ್ರಕಾರ ವಾಗ್ಮಿಗಳು, ಸಾಹಿತಿಗಳು ಆಗಿರುವ ಶ್ರೀಯುತರು ಶರಣ ಸಾಹಿತ್ಯದ ಮೇಲೆ ಅಪಾರ ಆಸಕ್ತಿ ಹೊಂದಿದ್ದು ಅವರ ಜನ್ಮದಿನದ ನಿಮಿತ್ಯ ಸಸಿ ನೆಡುವ ಮೂಲಕ ಶುಭ ಕೋರುತ್ತಿದ್ದೇವೆ ಎಂದು ಹೇಳಿದರು ಶರಣ ಸಾಹಿತ್ಯ ಪರಿಷತ್ತಿನ ಸುರಪುರ ತಾಲೂಕ ಘಟಕದ ಉಪಾಧ್ಯಕ್ಷ ಶಿವಶರಣಪ್ಪ ಹೆಡಗಿನಾಳ ಹಾಗೂ ಪದಾಧಿಕಾರಿಗಳಾದ ಮಲ್ಲು ಬಾದಾಪುರ, ದೇವರಾಜ್ ನಂದಗಿರಿ ಸಿದ್ದಪ್ರಸಾದ್ ಪಾಟಿಲ್, ಗುರುಸ್ವಾಮಿ ಹೆಗ್ಗಣದೊಡ್ಡಿ ಸೇರಿದಂತೆ ಇತರರಿದ್ದರೂ.

ವರದಿ:-ಮಲ್ಲಿಕಾರ್ಜುನ

WhatsApp Group Join Now
Telegram Group Join Now
Share This Article
error: Content is protected !!