Ad imageAd image

ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಿಗೆ ಮತ್ತೆ ಒಲಿದ ವಿಜಯಮಾಲೆ.

Bharath Vaibhav
ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಿಗೆ ಮತ್ತೆ ಒಲಿದ ವಿಜಯಮಾಲೆ.
WhatsApp Group Join Now
Telegram Group Join Now

ಬಾಗಲಕೋಟೆ:- ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಿಗೆ ಮತ್ತೆ ಒಲಿದ ವಿಜಯಮಾಲೆ. ಬಿ ಜೆ ಪಿ ತೆಕ್ಕೆಗೆ ಕೋಟೆ ನಗರಿ ಲೋಕಸಭಾ ಗದ್ದುಗೆ.ಲೋಕಸಭಾ ಚುನಾವಣೆಯಲ್ಲಿ ಸತತ ಗೆಲುವಿನ ಕಿರೀಟವನ್ನೇ ಹೊತ್ತ ಸತತ 4 ಬಾರಿ ಹ್ಯಾಟ್ರಿಕ ಆಗಿದ್ದ ಭಾರತೀಯ ಜನತಾ ಪಕ್ಷದ ಬಾಗಲಕೋಟೆ ಲೋಕಸಭಾ ಚುನಾವಣಾ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ 5 ನೇ ಬಾರಿಯೂ 68000 ಅರವತ್ತೇ0ಟು ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಸಂಯುಕ್ತಾ ಪಾಟೀಲ ಅವರನ್ನು ಸೋಲಿಸಿ ಕೋಟೆ ನಗರಿ ಗದ್ದುಗೆಗೆ ಏರಿರುವ ಹಳೇ ಹುಲಿ 5 ನೇ ಬಾರಿ ಗೆದ್ದು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಎನ್ನಬಹುದು.ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು.

ಮತ ಎಣಿಕೆ ಕೇಂದ್ರದಲ್ಲಿಯೇ ನಮ್ಮ ಮಾದ್ಯಮದಲೆ ಜೊತೆ ಮಾತನಾಡಿ ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಮುಖಂಡರುಗಳಿಗೆ ಅಭಿನಂದನೆಗಳನ್ನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಬಿ ಜೆ ಪಿ ಜಿಲ್ಲಾಧ್ಯಕ್ಷರಾದ ಶಾಂತಗೌಡ. ಟಿ. ಪಾಟೀಲ, ಬಸವಂತಪ್ಪ ತಳವಾರ, ಶೇಬನ್ನವರ ಶಿವು ಭಿಕ್ಷಾವತಿಮಠ, ಶಿವು ಹೋಳಿ ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!