ಬಳ್ಳಾರಿ : ನಗರದ ತಾಳೂರು ರಸ್ತೆಯ ಎಸ್ಬಿಐ ಎಟಿಎಂ ಕಳ್ಳತನಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ||ಶೋಭಾರಾಣಿ ತಿಳಿಸಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್ಪಿ ನಗರದ ತಾಳೂರು ರಸ್ತೆಯ ಎಸ್ಬಿಐ ಎಟಿಎಂ ಕಳ್ಳತನ ಕೃತ್ಯ ನಡೆದಿತ್ತು. ಬಳ್ಳಾರಿ ನಗರದ ನಿವಾಸಿಗಳಾದ ಜೆ. ಅವಿನಾಶ್, 27 ವರ್ಷ ಶಿವರಾಜ್, ವ: 29 ವರ್ಷ ಅರೆಸ್ಟ್ ಆಗಿದ್ದಾರೆ.
ಆರೋಪಿದಳನ್ನು ಬಳ್ಳಾರಿ ನಗರದಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಸದ್ಯಕ್ಕೆ ತನಿಖೆ ಮುಂದುವರಿದಿದೆ ಹೀಗಾಗಿ ಬೇರೆನೂ ಹೇಳಲು ಆಗುವುದಿಲ್ಲ ಎಂದರು.




