Ad imageAd image

ಸ್ನಾನಕ್ಕೆ ಹೋದ ಯುವಕ ಸಾವು,ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ

Bharath Vaibhav
ಸ್ನಾನಕ್ಕೆ ಹೋದ ಯುವಕ ಸಾವು,ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ
WhatsApp Group Join Now
Telegram Group Join Now

ಗೋಕಾಕ : ಸ್ನಾನಕ್ಕೆ ಹೋದ ಯುವಕ ನದಿಯಲ್ಲಿ ಮುಳುಗಿ ಸಾವಿಗಿಡಾದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ‌ ನಡೆದಿದೆ.ಮನೋಜ ಲಕ್ಷ್ಮಣ ನಾಯಕ (15) ವರ್ಷದ ಯುವಕ ಸಾವಿಗಿಡಾದ ಯುವಕ ಎಂದು ತಿಳಿದು ಬಂದಿದೆ,

ಕೊಣ್ಣೂರ ದುಪಧಾಳ ಸೇತುವೆ ಕೆಳಗಿರುವ ಘಟಪ್ರಭಾ ನದಿಯಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದ್ದಾಗ 3 ಹುಡುಗರು ಈಜಲು ಹೊಗಿದ್ದಾಗ ಮನೋಜ ಲಕ್ಷ್ಮಣ ನಾಯಕ (15) ಇತನಿಗೆ ಅಷ್ಟೊಂದು ಈಜು ಬರದ ಕಾರಣ ರಬಸದಿಂದ ಹರಿಯುತ್ತಿರುವ ನೀರಿನಲ್ಲಿ ಸಿಕ್ಕುಸಾವಿಗಿಡಾಗಿದ್ದಾನೆ, ಅದೃಷ್ಟಾವಶ ಜೊತೆಯಲ್ಲಿ ಹೋದ 2 ಯುವಕರು ಸಾವಿನಿಂದ ಪಾರಾಗಿ ಬಂದಿದ್ದಾರೆ.

ಇನ್ನುಮೃತ ಯುವಕ ಕೊಣ್ಣೂರಿನ ರೇಲ್ವೆ ಸ್ಟೇಷನ್ (ಗೋಕಾಕ ರೋಡದ) ನಿವಾಸಿ ಎಂದು ತಿಳಿದು ಬಂದಿದ್ದು, ಸ್ಥಳಿಯ ಮಿನುಗಾರರು ಮತ್ತು ಗೋಕಾಕ ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ ಮೂಲಕ ಯುವಕನ ಶವದ ಪತ್ತೆಗಾಗಿ ಅಗ್ನಿ ಶ್ಯಾಮಕ ದಳದ ಗೋಕಾಕ ಠಾಣಾಧಿಕಾರಿ ಸದಾನಂದ ಮೆಳವಂಕಿ,ಗೋಕಾಕ ಸಿಪಿಆಯ್, ಪಿ,ಎಸ್,ಐ, ಮತ್ತು ಪೋಲಿಸ ಸಿಬ್ಬಂದಿಗಳು ಸ್ಥಳದಲ್ಲಿದ್ದು ಹುಡುಕಾಟ ನಡೆಸಿದ್ದಾರೆ.

ವರದಿ :ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!