ಚಿಟಗುಪ್ಪ:ತಾಲ್ಲೂಕಿನ ಕಂದಗೂಳ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಪ್ರಭು ಮಡಿವಾಲೇಶ್ವರ 90ನೇ ಐತಿಹಾಸಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಬಸವಲಿಂಗ ಅವಧೂತರಿಂದ ಪ್ರವಚನ ನಡೆಯಲ್ಲಿದೆ.
ಇಂದು ಮಾ.15 ಭಾನುವಾರ ಬೆಳಗ್ಗೆ ಕಂದಗೂಳ ಗ್ರಾಮದಲ್ಲಿ ಶ್ರೀ ಗುರು ಶಿವಯೋಗಿ ಪ್ರಭು ಮಡಿವಾಳೇಶ್ವರ ಪಲ್ಲಕ್ಕಿ ಮೆರವಣಿಗೆ ಹಾಗೂ ವಚನ,ಸಂಗೀತ,ಭಜನೆಯೊಂದಿಗೆ ಪಥ ಸಂಚಲನ ನಡಿಯಲಿದೆ.ನಂತರ 11 ಗಂಟೆಯಿಂದ ಸಾಯಂಕಾಲದವರೆಗೆ ಮಹಾಪ್ರಸಾದ ವ್ಯವಸ್ಥೆ ಜರುಗಲಿದೆ.ಸಂಜೆ 7ಗಂಟೆಗೆ ಮಲ್ಲಯ್ಯಗಿರಿ ಹಾಗೂ ದೇಗುಲಮಡಿ ಆಶ್ರಮದ ಪಿಠಾಧಿಪತಿ ಶ್ರೀ ಡಾ.ಬಸವಲಿಂಗ ಅವಧೂತರಿಂದ ಪ್ರವಚನ ನಡೆಯಲಿದೆ.
ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಗುರು ಶಿವಯೋಗಿ ಪ್ರಭು ಮಡಿವಾಳೇಶ್ವರ ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಜೀಶ್ ಲಂಬುನೋರ್




