ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ತಾಲೂಕಿನ ನೂತನ ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿ ಶೇಖರ್ ಹೊರಪೇಟೆ ಗುರುವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಅಧಿಕಾರಿಯಾಗಿದ್ದ ಚನ್ನ ಬಸಪ್ಪ ನಿವೃತ್ತಿ ಹೊಂದಿದ್ದು, ಅವರ ಸ್ಥಾನಕ್ಕೆ ಶೇಖರ್ ಹೊರಪೇಟೆ ಅವರನ್ನು ಪ್ರಭಾರಿ ಬಿಇಒ ಆಗಿ ನೇಮಿಸಿ ಜಿಲ್ಲಾ ಪಂಚಾಯತಿ ಆಡಳಿತ ಆದೇಶ ಹೊರಡಿಸಿದೆ.
ನೂತನ ಅಧಿಕಾರಿ ಅವರನ್ನು ಶಿಕ್ಷಕರು ಮತ್ತು ಸಮುದಾಯದ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಸುಧಾದೇವಿ, ಕಾರ್ಯದರ್ಶಿ ಮಲ್ಲಯ್ಯ, ವರಪ್ರಸಾದ್, ವಿಜಯಕುಮಾರಿ, ಕುಬೇರಾಚಾರಿ, ಮಾರ್ಗದಪ್ಪ, ಪ್ರಕಾಶ್, ಹೇಮಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ವರದಿ : ಪಿ. ಶ್ರೀನಿವಾಸ್