ಅರಸೀಕೆರೆ : ನಾಡಿನಾದ್ಯಂತ ಇತಿಹಾಸ ಪ್ರಸಿದ್ಧಿ ಹೊಂದಿರುವ ಮೂಗುತಿ ಸುಂದರಿ ಗೌರಮ್ಮ ದೇವಿ ದರ್ಶನ ಭಾಗ್ಯದಿಂದ ಜನ್ಮ ಜನ್ಮದ ಶಾಪ ವಿಮೋಚನೆ ಜೊತೆಗೆ ಮೋಕ್ಷ ಸಿಗಲಿದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು ತಾಲೂಕಿನ ಕಣಕಟ್ಟೆ ಹೋಬಳಿ ಮಾಡಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಶ್ರೀಗಳವರ ನಿರ್ದೇಶನದಂತೆ ಆಯೋಜಿಸಿದ್ದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿಯವರ 138 ನೇ ವರ್ಷದ ಪುಣ್ಯ ಸಂಸ್ಕರನೋತ್ಸವ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾಡಾಳು ಮೂಗುತಿ ಗೌರಮ್ಮ ಎಂದೇತನ್ನಮಹಿಮೆ ಪವಾಡದಿಂದಲೇನಾಡಿನಾದ್ಯಂತಲಕ್ಷಾಂತರ ಮಂದಿಭಕ್ತವೃಂದಾವನ್ನುಹೊಂದಿದ್ದುಪ್ರಸ್ತುತತಾಯಿ ಜಗನ್ಮಾತೆ ಹೆಸರಿನಲ್ಲಿ ಶ್ರೀ ಮಠದಿಂದಲೇ ಸುಮಾರು ಒಂದುವರೆ ಕೋಟಿ ರೂಗಳವೆಚ್ಚದಲ್ಲಿ ದೇವಾಲಯ ನಿರ್ಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದು ಶಕ್ತಿ ಪೀಠವಾಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು ಪರಮ ತಪಸ್ವಿಶಿವಲಿಂಗಜ್ಜ ಯನವರು 100 ಕೋಟಿ ಜಪ ಮಾಡಿ ಮೂಗುತಿಸಿದ್ಧಿಸಿದ್ದುಅದನ್ನುಗೌರಮ್ಮ ದೇವಿಗೆ ಗೌರಿ ಹಬ್ಬದಂದು ತೊಡಿಸಿ ಸಾಕ್ಷಾತ್ ಪಾರ್ವತಿಯೇ ಎಂದು ಆಶೀರ್ವದಿಸಿದ್ದು ಅದರಿಂದಲೇ ಭಕ್ತರ ಕಷ್ಟಕಾರ್ಪಣ್ಯಗಳುಪರಿಹಾರವಾಗುತ್ತಿದೆ ಎಂದು ಅವರು ಹೇಳಿದ್ದರು .
ಎನ್ನಲಾಗಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಗ ರಾಜೇಂದ್ರ ಸ್ವಾಮೀಜಿ ಮಾತನಾಡಿ ದೇಶಾದ್ಯಂತಹಲವುದೇವಿಯವರ ಶಕ್ತಿಪೀಠಗಳಂತೆಮಾಡಾಳು ಮೂಲಸ್ಥಾನಗೌರಮ್ಮದೇವಿ ವೇಗಲವು ಸಹಶಕ್ತಿಪೀಠ ವಾಗಿ ಮುಂದಿನ ದಿನಗಳಲ್ಲಿ ನಾಡಿನ ಜನತೆಯ ಆರಾಧ್ಯ ದೇವಿಯಾಗಿಆಗಲಿದೆ ಜೊತೆಗೆ ಸುಕ್ಷೇತ್ರದ ಶಕ್ತಿಯು ಇಲ್ಲಿ ಸಮ್ಮಿಲನವಾಗಿರುವುದರಿಂದಈಇದರ ಕೀರ್ತಿರಾಜ್ಯದ ಉದ್ದಗಲಕ್ಕೂ ಬೆಳಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಸ್ವಾಮೀಜಿ ಹೇಳಿದರು ಮನುಷ್ಯ ಹಣ ಅಧಿಕಾರದ ಬೆನ್ನೆತ್ತಿ ಓಡದೆ ಸತ್ಯ ಧರ್ಮ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಎಂದು ಮೂಲಕ ಎಂದು ಬಸವಣ್ಣನವರಕಾಯಕದಲ್ಲಿ ಕೈಲಾಸ ಕಾಣಬೇಕು ಅಂತಹ ಮನುಷ್ಯನ ಬದುಕುಮಾತ್ರವಲ್ಲಜನಾರ್ದನ ಮೆಚ್ಚುವಂತೆ ಆಗುತ್ತದೆ ಎಂದು ತಿಳಿಸಿದರು .
ಚಲನಚಿತ್ರ ನಟ ಎಸ್ ದೊಡ್ಡಣ್ಣ ಮಾತನಾಡಿ ಶಿವ ನಾದಪ್ರಿಯನೂ ಅಲ್ಲವೇದಪ್ರಿಯನೂ ಅಲ್ಲ ಅವನು ಭಕ್ತಿ ಪ್ರಿಯಅವನನ್ನು ಒಲಿಸಿಕೊಳ್ಳಲುಶ್ರದ್ಧೆ ಭಕ್ತಿಯಿಂದಮಾತ್ರ ಸಾಧ್ಯಹರಿಹರರು ಸಹಹಣೆಯ ಮೇಲೆ ಬದಲಿಸಲಾಗದ ಹಣೆಬರಹವನ್ನು ಹಣೆಯ ಮೇಲೆ ವಿಭೂತಿ ಧರಿಸುವ ಮೂಲಕ ತಾಯಂದಿರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸ ಬೇಕು ಎಂದು ಅವರು ಕಿವಿಮಾತು ಹೇಳಿದರು.
ಮಾಡಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿಕೋಳಗುಂದ ಕೇದಿಗೆ ಮಠದಶ್ರೀ ಜಯಚಂದ್ರ ಶೇಖರ ಸ್ವಾಮೀಜಿದೊಡ್ಡಗುಣಿರೇವಣಸಿದ್ದೇಶ್ವರಶಿವಾಚಾರ್ಯ ಸ್ವಾಮೀಜವನವಳ್ಳಿಕರಿಸಿದ್ದೇಶ್ವರ ಮಠದಶಿವಪ್ರಕಾಶ್ ಶಿವಾಚಾರ್ಯ ಸ್ವಾಮೀಜಿಕೆಬಿದರೆ ದೊಡ್ಡ ಮಠದರಘು ಕುಮಾರ ಶಿವಾಚಾರ್ಯ ಸ್ವಾಮೀಜಿಡಿ ಎಂ ಕುರ್ಕೆ ವಿರಕ್ತಮಠದ ಶಶಿಶೇಖರಸಿದ್ದ ಬಸವ ಸ್ವಾಮೀಜಿ ಕುಪ್ಪೂರು ಗದ್ದಿಗೆ ಮಠದ ತೇಜಸ್ವಿಶಿವಾಚಾರ್ಯ ಸ್ವಾಮೀಜಿಸಿದ್ದೇಶ್ ನಾಗೇಂದ್ರ ಉಪಸ್ಥಿತರಿದ್ದರು ಕಾರ್ಯಕ್ರಮಕ್ಕೆ ಮುನ್ನಪುಷ್ಪಾಲಂಕೃತ ಮಂಟಪದಲ್ಲಿ ಪರಮ ತಪಸ್ವಿಶಿವಲಿಂಗಯ್ಯ ಸ್ವಾಮೀಜಿಯವರ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ವರದಿ : ರಾಜು ಅರಸಿಕೆರೆ




