ಚಿಕ್ಕೋಡಿ : ಶ್ರೀ ಅಲ್ಲಮಪ್ರಭು ಚಿಕ್ಕೋಡಿ ಚಿಂಚಣಿ ಸಿದ್ದಸಂಸ್ಥಾನ ಮಠ, ದಾಸೋಹ ಜಾತ್ರೆಯ ಜಾಹೀರಾತು ಪತ್ರಿಕೆಯನ್ನು ಪೂಜ್ಯರಾದ ಶ್ರೀ ಶಿವಪ್ರಸಾದ ದೇವರು ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರ ಉಪಸ್ಥಿತಿಯಲ್ಲಿ ಸುಕ್ಷೇತ್ರ ತೋರಣಹಳ್ಳಿಯ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವದಿಂದ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತರು, ಗಣ್ಯರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಜಾತ್ರೆಯ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದಾಸೋಹ ಜಾತ್ರೆಯು ಧಾರ್ಮಿಕತೆ, ಸೇವಾಭಾವ ಮತ್ತು ಸಮಾಜ ಒಗ್ಗಟ್ಟಿನ ಸಂಕೇತವಾಗಿದ್ದು, _ ಭಕ್ತಾದಿಗಳಿಗೆ ಆತ್ಮೀಯ ಅನುಭವವನ್ನು ನೀಡುವ ಮಹೋತ್ಸವವಾಗಿರುತ್ತದೆ. ಎಲ್ಲ ಭಕ್ತಾಧಿಗಳಿಗೆ ಜಾತ್ರೆಯಲ್ಲಿ ಭಾಗವಹಿಸಲು ಆತ್ಮೀಯ ಆಹ್ವಾನ.
ವರದಿ :ರಾಜು ಮುಂಡೆ




