Ad imageAd image
- Advertisement -  - Advertisement -  - Advertisement - 

ಸಾಮಾಜಿಕ ಹೋರಾಟಗಾರರಾದ ತುಳಸಪ್ಪ ಪಾತ್ರೋಟಿ ಸಾರತ್ಯದಲ್ಲಿ

Bharath Vaibhav
ಸಾಮಾಜಿಕ ಹೋರಾಟಗಾರರಾದ ತುಳಸಪ್ಪ ಪಾತ್ರೋಟಿ ಸಾರತ್ಯದಲ್ಲಿ
WhatsApp Group Join Now
Telegram Group Join Now

ಬಾದಾಮಿ :-ಸಾಮಾಜಿಕ ಹೋರಾಟಗಾರರಾದ ತುಳಸಪ್ಪ ಪಾತ್ರೋಟಿ ಸಾರತ್ಯದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಹುನಗುಂದ ಮತಕ್ಷೇತ್ರದ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ.

ಕೋಟೆ ನಗರಿ ಬಾಗಲಕೋಟೆ ಲೋಕಸಭಾ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತ ಪಾಟೀಲ ಪರ ಸಾಮಾಜಿಕ ಹೋರಾಟಗಾರರಾದ ತುಳಸಪ್ಪ ಪಾತ್ರೋಟಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಳ್ಳಿಗಳಾದ ಅಮೀನಗಡ ಸೂಳೇಬಾವಿ,ತಿಮ್ಮಾಪುರ ಹುನಗುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಮತದಾರರನ್ನು ಸೇರಿಸಿ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಅವರ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಇಂದು ಬಾದಾಮಿ ಮತಕ್ಷೇತ್ರದ ಹಳ್ಳಿಗಳಾದ ಸುಳ್ಳ, ಕಿಟ್ಟಲಿ, ಗೋವನಕೊಪ್ಪ, ಕರಡಿಗುಡ್ಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಅವುಗಳು ಜನಸಾಮಾನ್ಯರ ಜೀವನೋಪಾಯಕ್ಕೆ ಅನುಕೂಲಕರ ಆಗಿರುವುದರ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿ, ಯುವನಾಯಕಿ ಶ್ರೀಮತಿ ಸಂಯುಕ್ತಾ ಪಾಟೀಲ ಅವರಿಗೆ ಮತ ನೀಡುವ ಮೂಲಕ ಬಾಗಲಕೋಟೆ ಮತಕ್ಷೇತ್ರದ ಹೊಸ ಅಧ್ಯಾಯಕ್ಕೆ ಅನುವು ಮಾಡಿ ಕೊಡೋಣ ನೀವೆಲ್ಲ ಸಂಯುಕ್ತಾ ಪಾಟೀಲ ಅವರಿಗೆ ಆಶೀರ್ವಾದ ಮಾಡಿ ಒಂದೇ ಒಂದು ಅವಕಾಶ ಕೊಟ್ಟರೆ ನಿಮ್ಮ ಧ್ವನಿಯಾಗಿ ನಿಂತು ಕೆಲಸ ಮಾಡುತ್ತಾರೆ ಅವರಿಗೆ ನಾವು ನೀವು ಸಂಪೂರ್ಣ ಬೆಂಬಲ ಅಧಿಕ ಮತಗಳಿಂದ ಗೆಲ್ಲಿಸಿ ತರೋಣ ಎಂದು ತಿಳಿ ಹೇಳಿ ಮತಯಾಚನೆ ಮಾಡಿದರು.

ವರದಿ:- ರಾಜೇಶ್ ಎಸ್. ದೇಸಾಯಿ 

 

WhatsApp Group Join Now
Telegram Group Join Now
Share This Article
error: Content is protected !!