Ad imageAd image

ಭರವಸೆ ಮೂಡಿಸಿದ ಪೂರ್ವ ಮುಂಗಾರು : ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ರಸಗೊಬ್ಬರ ವಿತರಿಸಲು ಕೃಷಿ ಇಲಾಖೆ ಸಜ್ಜು; ಸೋಮಲಿಂಗಪ್ಪ ಅಂಟರತಾನಿ

Bharath Vaibhav
WhatsApp Group Join Now
Telegram Group Join Now

ಇಲಕಲ್:-   ಕಳೆದ ವರ್ಷದ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಈ ವರ್ಷವ ಮುಂಗಾರು ಕೈ ಕೊಡುವ ಚಿಂತನೆಯಲ್ಲಿ ರೈತರಿದ್ದರು, ವರುಣದೇವ ತನ್ನ ಕೃಪೆಯನ್ನು ತಾಲೂಕಿನ ಅತ್ಯಂತ ಉತ್ತಮ ಮಳೆಯಾಗಿದೆ. ಕಳೆದೊಂದು ವಾರದ ಮುಂದೆ ಆಗಾಗ ಮಳೆ ಸುರಿಯುತ್ತಿದೆ, ಹೀಗಾಗಿ ರೈತರು ಬಿತ್ತನೆ ಪೂರ್ವ ಚಟುವಟಿಕೆಗಳಗೆ ವೇಗ ನೀಡಿವೆ.

ಹೀಗಾಗಿ ರೈತರ ಬಿತ್ತನೆಗೆ ಅನುಗುಣವಾಗಿ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಸಜ್ಜಾಗಿದೆ. ಕರಡಿ ಇಲಕಲ್ ಹುನಗುಂದ ಅಮಿನಗಡ ಹೋಬಳಿಗಳಲ್ಲಿ ಈಗಾಗಲೇ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ.

ಈ ವರ್ಷದ ಮುಂಗಾರು ಅಂಗಾಮಿನಲ್ಲಿ ಹುನಗುಂದ ತಾಲೂಕಿನಲ್ಲಿ 27275 ಮತ್ತು ಇಳಕಲ್ ತಾಲೂಕಿನಲ್ಲಿ 25100 ಹೆಕ್ಟರ್ ಬಿತ್ತನೆ ಗುರಿ ಹೊಂದಿದ್ದು ಉತ್ತಮ ಮಳೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಗೊಬ್ಬರ ಲಭ್ಯವಿದೆಯೆಂದು ತಾಲೂಕ ಸಹಾಯಕ ಕೃಷಿ ನಿರ್ದೇಶಕರಾದ ಸೋಮಲಿಂಗಪ್ಪ ಅಂಟರತಾನಿ ದಿನಪತ್ರಿಕೆಗೆ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!