Ad imageAd image

‘ಶ್ರೀ ಕೃಷ್ಣನು ಎಲ್ಲಾ ಧರ್ಮಕ್ಕೂ ಉತ್ತಮ ಸಂದೇಶವನ್ನು ನೀಡಿದ ಮಹಾನ್ ಸಂತ’

Bharath Vaibhav
‘ಶ್ರೀ ಕೃಷ್ಣನು ಎಲ್ಲಾ ಧರ್ಮಕ್ಕೂ ಉತ್ತಮ ಸಂದೇಶವನ್ನು ನೀಡಿದ ಮಹಾನ್ ಸಂತ’
WhatsApp Group Join Now
Telegram Group Join Now

——————–ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್

ಮೊಳಕಾಲ್ಮುರು: ಶ್ರೀ ಕೃಷ್ಣನು ಎಲ್ಲಾ ಧರ್ಮಕ್ಕೂ ಎಲ್ಲ ವರ್ಗಕ್ಕೂ ಸೇರಿದ ಮಹಾನ್ ಸಂತ ಇಡೀ ಪ್ರಪಂಚಕ್ಕೆ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸಾಧನೆ ಮಾಡಿದ ಮಾನವತವಾದಿ ಇಂತಹ ಕುಲದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.

ಪಟ್ಟಣದ ಕೋನಸಾಗರ ರಸ್ತೆಯಲ್ಲಿ ಶನಿವಾರ ಕೃಷ್ಣ ಜಯಂತಿ ಪ್ರಯುಕ್ತ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು , ಶ್ರೀ ಕೃಷ್ಣನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ರವಿಕುಮಾರ್ ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಸರಳವಾಗಿ ಆಚರಿಸುತ್ತಿದ್ದೇವೆ. ನಾಡಿನಾದ್ಯಂತ ಈ ದಿನ ಕೃಷ್ಣನನ್ನು ಪೂಜಿಸುವ ದಿನವಾಗಿದೆ. ದುಷ್ಟರನ್ನು ಶಿಕ್ಷಿಸಲು ಮತ್ತು ನೀತಿವಂತರನ್ನು ರಕ್ಷಿಸಲು ಭೂಮಿಗೆ ಇಳಿದ ಶ್ರೀ ಕೃಷ್ಣನ ಈ ಹಬ್ಬವನ್ನು ಎಲ್ಲರೂ ಸಂತೋಷ ಸಡಗರದಿಂದ ಆಚರಿಸುತ್ತಿದ್ದಾರೆ. ಪ್ರತಿಯೊಬ್ಬರು ಭಗವಾನ್ ಕೃಷ್ಣನ ಭಗವದ್ಗೀತೆಯನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳಬೇಕು ಅದನ್ನು ಪ್ರತಿಯೊಬ್ಬರೂ ಓದಬೇಕು ಅದರ ಸಾರಾಂಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಶ್ರೀ ಕೃಷ್ಣನು ಮಹಾಭಾರತದಲ್ಲಿ ತಮ್ಮ ಲೀಲೆಗಳನ್ನು ತೋರಿಸಿದ್ದಾರೆ ಇವರ ಬಗ್ಗೆ ಹೇಳುವುದಾದರೆ ಇಡೀ ದಿನ ಸಾಕಾಗುವುದಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಯಾದವ ಸಂಘದ ಅಧ್ಯಕ್ಷರಾದ ಡಿಸಿ ನಾಗರಾಜ್ ಕೂಡ ಕೃಷ್ಣನ ಅವತಾರಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಯಾದವ ಸಂಘದ ತಾಲೂಕು ಕಾರ್ಯದರ್ಶಿ ಸಮಾಜವಾದಿ ಪಾರ್ಟಿ ತಾಲೂಕು ಅಧ್ಯಕ್ಷರು ಜಿ ಏ ಜಯಣ್ಣ , ತಿಮ್ಮಯ್ಯ, ಪಿಟಿಹಟ್ಟಿ ಈರಣ್ಣ ನಿಂಗಣ್ಣ, ಲಕ್ಷ್ಮಿಪತಿ ನರಸಿಂಹ ಪ್ರವೀಣ್ ಕುಮಾರ್, ಪೆನ್ನೊಬ್ಳಿ, ಪಾಪಣ್ಣ ಮೇಕೆ ನಾಗರಾಜ ಭೀಮಣ್ಣ, ಕಲ್ಡೆಪ್ಪ ಪಾಪಣ್ಣ ಇನ್ನು ಹಲವು ಯಾದವ ಸಂಘದ ಕುಲಬಾಂಧವರು ಇದ್ದರು.

ವರದಿ : ಪಿ.ಎಂ. ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!