ಬೆಳಗಾವಿ : ಕುಮಾರ್ ಗಂಧರ್ವ ರಂಗಮಂದಿರ ಬೆಳಗಾವಿ ರವಿವಾರ ದಿನಾಂಕ 16/ 11/ 2೦25 ರಂದು ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ (ರಿ)ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ನಡೆಸಲ್ಪಟ್ಟಿತು.
ಈ ಕಾರ್ಯಕ್ರಮದಲ್ಲಿ ಮೆಲೋಡಿ ಆರ್ಕೆಸ್ಟ್ರಾ ಗಾಯನದೊಂದಿಗೆ ಗಣ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಪ್ರಶಸ್ತಿಗಳನ್ನು ರಾಜ್ಯದ ಮೂಲೆ ಮೂಲೆಗಳಿಂದ ಸಮಾಜಕ್ಕಾಗಿ ಶಿಕ್ಷಣಕ್ಕಾಗಿ ಸಂಸ್ಕೃತಿಕವಾಗಿ ಕಲಾ ಕೌಶಲ್ಯ ಇಂತಹ ಸಾಧಕರನ್ನು ಬರಮಾಡಿಕೊಂಡು ಅವರಿಗೆ ಸಕಲ ಗೌರವದೊಂದಿಗೆ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಲಾಗುತ್ತದೆ ಇದರಿಂದ ಸಂಸ್ಕೃತಿಯ ಬೆಳವಣಿಗೆ, ಹಿತ,ಗೌರವ, ಶಾಂತತೆ, ಸಮಾಜದ ಸುಧಾರಣೆ, ಸಾಧಕರ ಕೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಪಂಚಾಕ್ಷರಿ ಹಳಿಜೋಳ ಹಾಗೂ ಭಾರತ ವೈಭವ ದಿನಪತ್ರಿಕೆ ಬಿ ವಿ 5 ನ್ಯೂಸ್ ಜಿಲ್ಲಾ ವರದಿಗಾರರಾದ ರಾಜು ಮುಂಡೆ ಇವರಿಗೆ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು. ಅದರದೊಂದು ಕ್ಷಣ ಇನ್ನು ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಎಲ್ಲ ಸಾಧಕರಿಗೆ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಶ್ರೀ ಮು.ನಿ. ಪ್ರ. ಶಿವಮೂರ್ತಿ ಮಹಾಸ್ವಾಮೀಜಿಗಳ ವಿರಕ್ತಮಠ ಅರಳಿಕಟ್ಟಿ ಇವರ ಹಸ್ತದಿಂದ ದೀಪ ಬೆಳಗಿ ಆಶೀರ್ವಾದದಿಂದ ಸಾಧಕರಿಗೆ ಪ್ರಶಸ್ತಿ ಗಳಿಂದ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ಆರ್ ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ವಲಯ, ಡಾಕ್ಟರ್ ನವೀನ್ ಗಂಗರಡ್ಡಿ ಅಧಿಕ್ಶಕರು ಅಪ್ಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ, ಶ್ರೀ ಲಕ್ಷ್ಮಣ್ ಸಿ ಮಚ್ಚನ್ನವರ ಹಿರಿಯ ಪತ್ರಕರ್ತರು ರಾಜ್ಯಾಧ್ಯಕ್ಷರು ರಾ.ಸ.ಕ.ಸೇ.ಸಂಸ್ಥೆ ಅಧ್ಯಕ್ಷರು ಅಹಿಂಧ ಸೇನೆ ರಾಜ್ಯ ಅಧ್ಯಕ್ಷರು.

ಈ ಕಾರ್ಯಕ್ರಮದ ಅತಿಥಿಗಳಾದ ಶ್ರೀ ಕೆ ಟಿ ಕಾಂಬಳೆ, ಶ್ರೀ ವಾಸುದೇವ್ ಆರ್ ರಾಥೋಡ್, ಮುತ್ಯಪ್ಪ ಜಿ ಹುಕ್ಕೇರಿ, ಶ್ರೀ ರಮೇಶ್ ನಾ ಸಿಂಗಾಡಿ, ಶ್ರೀ ಪರ್ವಿನ್ ಎಸ್ ಕುಮಾರಿ ರೂಪಾ ರವಿ ಕಡಗಾವಿ, ಶ್ರೀಮತಿ ಶಾಂತ ಕುಲಕರ್ಣಿ ಹಳಿಯಾಳ, ಸರೋಜಿನಿ ಸಟ್ಟೋಳಕರ,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹಲವು ಗಣ್ಯರು ಮಾತನಾಡಿದ್ದಾರೆ ಬನ್ನಿ ಕೇಳೋಣ.
ನಿರೂಪಣೆ ಶ್ರೀ ಪರ್ವೀಣ ಎನ್ ಮುಖ್ಖೂಪಾಧ್ಯಾಯರು ಕೆ.ಎಚ.ಪಿ.ಜಿ.ಎಸ್ ನಡಸೋಶಿ
ಸಂದರ್ಭದಲ್ಲಿ ಕರೋಶಿಯ ಹಳೆ ಜೋಡಿ ಸಮಸ್ತ ಕುಟುಂಬಸ್ಥರು ಹಾಗೂ ಮಿತ್ರರು ಆಗಮಿಸಿದ್ದರು.
ವರದಿ: ರಾಜು ಮುಂಡೆ




