ಕಲಘಟಗಿ: ತಾಲೂಕಿನ ಕಾಮಧೇನು ಗ್ರಾಮದ ಕಲ್ಮೇಶ್ ಬಡಿಗೇರ ಅವರಿಗೆ, ರಾಜ್ಯಮಟ್ಟದ ಸಮಾಜಸೇವಾ ರತ್ನ ಪ್ರಶಸ್ತಿ ಪ್ರಕಟವಾಗಿದೆ, ಇದೆ ಜನೆವರಿ 26ಕ್ಕೆ ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಪೌಂಡೇಶನ್ ಬೆಂಗಳೂರು, ಹಾಗೂ ಕಲ್ಲಂಗುಟೆ ಕನ್ನಡ ಸಂಘ ಗೊವಾ ಇವರು ಜಂಟಿಯಾಗಿ ಆಯೋಜನೆ ಮಾಡಿರುವ ಗಣರಾಜ್ಯೋತ್ಸವ ಮತ್ತು ಸಂಕ್ರಾಂತಿ ಸಂಗೀತ ಸಂಭ್ರಮ 2025 ಕಾರ್ಯಕ್ರಮದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಾಳ ಹಾಬಜ್ಜ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ದಶಕಗಳಿಂದ ಬಡವರು ಮತ್ತು ಶೋಷಿತರ ಪರ ದ್ವನಿ ಎತ್ತುವ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.ಇವರ ಬಹುಕಾಲದ ಸಮಾಜಮುಖಿ ಸೇವೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಗೋವಾದ ಹಿರಿಯ ಪತ್ರಕರ್ತ ಮತ್ತು ಕಾರ್ಯಕ್ರಮ ಆಯೋಜಕ ಅನಿಲ್ ಸನದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ನಿತೀಶಗೌಡ ತಡಸ




