Ad imageAd image

ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಸುರೇಶ್ ಪಾಟೀಲ ಆತ್ಮಹತ್ಯೆಗೆ ಪ್ರಯತ್ನ ರಾಜಕೀಯ ರಂಗದಲ್ಲಿ ಆತಂಕ

Bharath Vaibhav
ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಸುರೇಶ್ ಪಾಟೀಲ ಆತ್ಮಹತ್ಯೆಗೆ ಪ್ರಯತ್ನ ರಾಜಕೀಯ ರಂಗದಲ್ಲಿ ಆತಂಕ
WhatsApp Group Join Now
Telegram Group Join Now

ಸಾಂಗ್ಲಿ :ಪಟ್ಟಣದ ರಾಷ್ಟ್ರವಾದಿ ಪಕ್ಷದ ಮುಖಂಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಸುರೇಶ್ ಆದಗೌಡ ಪಾಟೀಲ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಪಟ್ಟಣದ ಉಷಾಕಾಲ ಆಸ್ಪತ್ರೆಯಲ್ಲಿ ಅತಿ ದಕ್ಷತೆ ವಿಭಾಗದಲ್ಲಿ ದಾಖಲಿಸಲಾಗಿದ್ದು ಉಪಚಾರ ನಡೆಯುತ್ತಿದೆ.ಸದರಿ ಘಟನೆ ಕುರಿತು ವಿಶ್ರಾಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಗೆ ನಿಖರವಾದ ಮಾಹಿತಿ ದೊರೆತಿಲ್ಲ. ಸುರೇಶ್ ಪಾಟೀಲರು ಸಾಂಗ್ಲಿ ಪಟ್ಟಣದ ನೇಮಿನಾಥ ನಗರದಲ್ಲಿ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಪ್ರೇಯಸಿದ್ದೇಕೆ ಎಂಬುದು ಚರ್ಚೆಗೆ ಗ್ರಾಸವಾಗುತ್ತಿದೆ.ಕಳೆದ ಮೂರು ದಶಕಗಳಿಂದ ಸಾಂಗ್ಲಿ ಜಿಲ್ಲೆಯ ರಾಜಕೀಯ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಬೆಳೆದ ಶ್ರೇಷ್ಠ ವ್ಯಕ್ತಿಯಾಗಿದ್ದು ಇಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಸುದ್ದಿ ತಿಳಿಯುತ್ತಿದ್ದಂತೆ ಸಾಂಗ್ಲಿ ಬೆಳಗಾವಿ ಜಿಲ್ಲೆಯ ಜನತೆಗೆ ಆಘಾತವಾಯಿತು.

ಕೆಲ ಕಾರಣಗಳಿಂದ ಕಳೆದ ಒಂದು ವರ್ಷದಿಂದ ಸಾರ್ವಜನಿಕ ಕಾರ್ಯಕ್ರಮದಿಂದ ಅಲಿಪ್ತರಾಗಿದ್ದರು. ಆದರೆ ಕಳೆದ ವಾರವಷ್ಟೇ ಇವರ ಸಂಕಲ್ಪದಂತೆ ಸಾಕಾರಗೊಂಡ ಶೂರಶ್ರೀ ಸಂಗೀತ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಇವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಕುಟುಂಬದ ಸದಸ್ಯರಿಗೆ ತಿಳಿಯುತ್ತಿದ್ದಂತೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರನ್ನು ಅತಿದಕ್ಷಿತ ವಿಭಾಗದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಪ್ರಕೃತಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವರದಿ:ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
Share This Article
error: Content is protected !!