ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ವಿಜಯಪುರ ಹಾಗೂಬಸವನ ಬಾಗೇವಾಡಿ ತಾಲೂಕ ಆದರ್ಶ ಶಿಕ್ಷಕರ ವೇದಿಕೆ ಸಹಯೋಗದೊಂದಿಗೆ ಶಿಕ್ಷಕರಿಗಾಗಿ ಕ್ರಿಕೆಟ್ ಮಹಿಳಾ ಶಿಕ್ಷಕರಿಗಾಗಿ ಥ್ರೋ ಬಾಲ್ ಟೂರ್ನಮೆಂಟ್ ಜರುಗಿತು.

ಎರಡನೇ ದಿನವಾದ ಇಂದು ಫೈನಲ್ ಪಂದ್ಯದಲ್ಲಿ ಮನಗೂಳಿ ಕ್ರಿಕೆಟ್ ತಂಡ ಜಯಭೇರಿ ಬಾರಿ ಸಿದ್ದು ಮೊದಲನೇ ಬಹುಮಾನ ಪಡೆದು ಸಂಭ್ರಮ ಆಚರಿಸಿತು. ಮಹಿಳಾ ವಿಭಾಗದಲ್ಲಿ ಕೋಲಾರ್ ತಂಡವು ಮೊದಲ ಬಹುಮಾನ ಪಡೆದು ಕೊಂಡರು. ಇದೇ ಸಮಯದಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.
ಕ್ರಿಕೆಟ್ ಹಾಗೂ ಥ್ರೋಬಾಲ್ ಟೂರ್ನಮೆಂಟ್ ವ್ಯವಸ್ಥೆಯನ್ನು ಶ್ರೀ ಉಮೇಶ್ ಕೌಲಗಿ ಅಧ್ಯಕ್ಷರು ಜಿಲ್ಲಾ ಆದರ್ಶಶಿಕ್ಷಕರ ವೇದಿಕೆ ವಿಜಯಪುರ ಇವರು ಬಸವನಬಾಗೇವಾಡಿ ಆದರ್ಶ ಶಿಕ್ಷಕರ ವೇದಿಕೆ ಸಹಕಾರದೊಂದಿಗೆ ಕ್ರೀಡಾಕೂಟ ಯಶಸ್ವಿಯಾಗಿ ಜರಗಿತು.
ಇದೇ ಸಮಯದಲ್ಲಿ ಕ್ರೀಡಾ ಪ್ರೇಮಿಗಳು ಹಲವಾರು ತಂಡದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಕೃಷ್ಣಾ ಎಚ್. ರಾಠೋಡ




