Ad imageAd image

ಪಹಲ್ಗಾಮ್‌ ದಾಳಿಯಲ್ಲಿ ಪ್ರವಾಸಿಗರನ್ನ ಕೊಂದ ದುಷ್ಟರಿಗೆ ಧನ್ಯವಾದ ಎಂದ ಕಿರಾತಕ : ಬಂಧಿಸಿದ ಪೊಲೀಸರು 

Bharath Vaibhav
ಪಹಲ್ಗಾಮ್‌ ದಾಳಿಯಲ್ಲಿ ಪ್ರವಾಸಿಗರನ್ನ ಕೊಂದ ದುಷ್ಟರಿಗೆ ಧನ್ಯವಾದ ಎಂದ ಕಿರಾತಕ : ಬಂಧಿಸಿದ ಪೊಲೀಸರು 
WhatsApp Group Join Now
Telegram Group Join Now

ಜಾರ್ಖಂಡ್ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 28 ಅಮಾಯಕರನ್ನು ಬರ್ಬರವಾಗಿ ಕೊಂದ ಘಟನೆಗೆ ಇಡೀ ದೇಶವೇ ದುಃಖ ವ್ಯಕ್ತಪಡಿಸುತ್ತಿದೆ.

ವಿಶ್ವದ ಇತರೆ ದೇಶಗಳ ನಾಯಕರು ಕೂಡ ಈ ಕ್ರೂರ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.ಆದರೆ, ಜಾರ್ಖಂಡ್‌ನ ಬೊಕಾರೊ ನಿವಾಸಿ ಮೊಹಮ್ಮದ್ ನೌಶಾದ್ ಎಂಬಾತ ಪ್ರವಾಸಿಗರ ಹತ್ಯಾಕಾಂಡದ ಕುರಿತು ಹರ್ಷ ವ್ಯಕ್ತಪಡಿಸಿದ್ದಾನೆ.

ಧನ್ಯವಾದ ಪಾಕಿಸ್ತಾನ, ಧನ್ಯವಾದಗಳು ಲಷ್ಕರ್-ಎ-ತೈಬಾ. ಅಲ್ಲಾ ಯಾವಾಗಲೂ ನಿಮ್ಮನ್ನು ಸಂತೋಷವಾಗಿಡಲಿ ಎಂದು ಈ ಮೊಹಮ್ಮದ್ ನೌಶಾದ್ ಎಂಬ ದೇಶ ದ್ರೋಹಿ ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರ ದಾಳಿಯ ಕುರಿತು ಸಂತಸ ವ್ಯಕ್ತಪಡಿಸಿದ್ದಲ್ಲದೆ, ಭಯೋತ್ಪಾದಕರು ನಡೆಸಿದ ಕೃತ್ಯವನ್ನು ಬೆಂಬಲಿಸಿದ್ದಾನೆ.

ಈ ಪೋಸ್ಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಬಳಕೆದಾರರು ಜಾರ್ಖಂಡ್ ಪೊಲೀಸರನ್ನು ಟ್ಯಾಗ್ ಮಾಡಿ ಮೊಹಮ್ಮದ್ ನೌಶಾದ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಇದಕ್ಕೆ ಸ್ಪಂದಿಸಿದ ಬೊಕಾರೊ ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ವ್ಯಕ್ತಿಯ ಹಿನ್ನಲೆ ಕಲೆಹಾಕಿರುವ ಪೊಲೀಸರು ಮೊಹಮ್ಮದ್ ನೌಶಾದ್ 35 ವರ್ಷ ವಯಸ್ಸಿನವನಾಗಿದ್ದು, ಬಿಹಾರದ ಮದ್ರಸಾದಲ್ಲಿ ಶಿಕ್ಷಣ ಪಡೆದಿದ್ದಾನೆ.ಆತನ ಸಹೋದರನೊಬ್ಬ ದುಬೈನಲ್ಲಿ ವಾಸಿಸುತ್ತಿದ್ದಾನೆ. ನೌಶಾದ್ ತನ್ನ ತಂದೆಯೊಂದಿಗೆ ಬೊಕಾರೊದಲ್ಲಿ ವಾಸಿಸುತ್ತಾನೆ ಎಂದು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!