Ad imageAd image

ನ್ಯಾಯಮೂರ್ತಿಯ ಎದುರೇ ಮಹಿಳೆ ಕೊಚ್ಚಿ ಕೊಲೆ ಮಾಡಲು ಯತ್ನ : ಆರೋಪಿ ಅರೆಸ್ಟ್ 

Bharath Vaibhav
ನ್ಯಾಯಮೂರ್ತಿಯ ಎದುರೇ ಮಹಿಳೆ ಕೊಚ್ಚಿ ಕೊಲೆ ಮಾಡಲು ಯತ್ನ : ಆರೋಪಿ ಅರೆಸ್ಟ್ 
WhatsApp Group Join Now
Telegram Group Join Now

ಬೆಳಗಾವಿ: ಜಿಲ್ಲೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯ ಎದುರೇ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಆರೋಪಿಯೊಬ್ಬ ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರದಂದು ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಲಯಕ್ಕೆ ಆಸ್ತಿ ವಿಚಾರಕ್ಕಾಗಿ ಮೀನಾಕ್ಷಿ ರಾಮಚಂದ್ರ ಶಿಂಧೆ ಎಂಬುವರು ಆಗಮಿಸಿದ್ದರು.ಇದೇ ಕೇಸ್ ಸಂಬಂಧ ಕೋತನಟ್ಟಿ ಗ್ರಾಮದ ಬಾಬಾ ಸಾಹೇಬ್ ಚೌಹಾಣ್ ಕೂಡ ಹಾಜರಾಗಿದ್ದರು.

ಆಸ್ತಿ ವಿಚಾರಕ್ಕಾಗಿ ಸೋದರತ್ತೆಯ ಜೊತೆಗೆ ಬಾಬು ಸಾಹೇಬ್ ಅನೇಕ ಬಾರಿ ಜಗಳ ಕೂಡ ಆಡಿದ್ದರಂತೆ. ಮಂಗಳವಾರದಂದು ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದಂತ ಬಾಬಾ ಸಾಹೇಬ್ ಸಿಟ್ಟಿನಿಂದ ಕುಡುಗೋಲಿನಿಂದ ಮೀನಾಕ್ಷಿ ಮೇಲೆ ದಾಳಿ ನಡೆಸಿದ್ದಾನೆ.

ಸ್ಥಳದಲ್ಲಿದ್ದಂತ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಕ್ಷಣಕಾಲ ನಡೆದಂತ ಈ ಘಟನೆಯಿಂದ ಕೋರ್ಟ್ ಆವರಣದಲ್ಲಿ ಆತಂಕವನ್ನೂ ಮೂಡಿಸಿತ್ತು. ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದಂತ ಆರೋಪಿ ಬಾಬಾ ಸಾಹೇಬ್ ಬಂಧಿಸಿ, ಜೈಲಿಗಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!