Ad imageAd image

ಇಂದು ಬಾಗಲಕೋಟೆ, ದಾವಣಗೆರೆ ಮತಕ್ಷೇತ್ರಳಿಗೆ ಉಪಚುನಾವಣೆ : ಮತದಾನ ಪ್ರಕ್ರಿಯೆ ಆರಂಭ

Bharath Vaibhav
ಇಂದು ಬಾಗಲಕೋಟೆ, ದಾವಣಗೆರೆ ಮತಕ್ಷೇತ್ರಳಿಗೆ ಉಪಚುನಾವಣೆ : ಮತದಾನ ಪ್ರಕ್ರಿಯೆ ಆರಂಭ
ELECTION
WhatsApp Group Join Now
Telegram Group Join Now

ಬೆಂಗಳೂರು : ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಏಪ್ರಿಲ್ 9) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.

ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗಾಗಿ ಇಂದು ಬಿಗ್ ಫೈಟ್ ನಡೆಯುತ್ತಿದೆ.

ಪ್ರತಿಷ್ಠೆಯ ಕಣ: ಆಡಳಿತಾರೂಢ ಕಾಂಗ್ರೆಸ್‌ಗೆ ಈ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿ ಕೈ ಕೋಟೆಗೆ ಲಗ್ಗೆ ಇಡಲು ಭರ್ಜರಿ ತಂತ್ರ ರೂಪಿಸಿದೆ.

ಅಭ್ಯರ್ಥಿಗಳ ವಿವರ:

ದಾವಣಗೆರೆ ದಕ್ಷಿಣ: ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ (ಕಾಂಗ್ರೆಸ್) vs ಶ್ರೀನಿವಾಸ್ ಟಿ. ದಾಸಕರಿಯಪ್ಪ (ಬಿಜೆಪಿ).

ಬಾಗಲಕೋಟೆ: ಉಮೇಶ್ ಮೇಟಿ (ಕಾಂಗ್ರೆಸ್) vs ವೀರಣ್ಣ ಚರಂತಿಮಠ (ಬಿಜೆಪಿ).

ಮತದಾನ ವಿವರ – ಬಾಗಲಕೋಟೆ – ದಾವಣಗೆರೆ ದಕ್ಷಿಣ

ಮತಗಟ್ಟೆಗಳ ಸಂಖ್ಯೆ – 322 – 284

ಸಿಬ್ಬಂದಿ – 2500 – 1,489

ಕಣದಲ್ಲಿರುವ ಅಭ್ಯರ್ಥಿಗಳು – 9 – 25

ಒಟ್ಟು ಮತದಾರರು – 2,59,797 – 2,31,072

ಪುರುಷರು – 1,26,999 – 1,13,399

ಮಹಿಳೆಯರು – 1,32,775 – 1,17,690

ಬಿಸಿಲ ಬೇಗೆಯಲ್ಲೂ ಮತದಾನಕ್ಕೆ ಸಕಲ ಸಿದ್ಧತೆ

ಬೇಸಿಗೆಯ ಸುಡು ಬಿಸಿಲಿರುವುದರಿಂದ ಮತದಾರರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸಿದೆ:

ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ.

ಪ್ರತಿಯೊಂದು ಮತಗಟ್ಟೆಯಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಉಚಿತ ವಾಹನ ಸೌಲಭ್ಯ ಒದಗಿಸಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!