Ad imageAd image
- Advertisement -  - Advertisement -  - Advertisement - 

ಸೊಸೆ ದಲಿತಳೆಂಬ ಕಾರಣಕ್ಕೆ ಗಂಡನ ಮನೆಯವರಿಂದ ಥಳಿಸಿ ಹತ್ಯೆ

Bharath Vaibhav
ಸೊಸೆ ದಲಿತಳೆಂಬ ಕಾರಣಕ್ಕೆ ಗಂಡನ ಮನೆಯವರಿಂದ ಥಳಿಸಿ ಹತ್ಯೆ
WhatsApp Group Join Now
Telegram Group Join Now

ಕೊಪ್ಪಳ : ರಾಜ್ಯದಲ್ಲಿ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸೊಸೆ ದಲಿತಳೆಂಬ ಕಾರಣಕ್ಕೆ ಆಕೆಯನ್ನು ಗಂಡನ ಮನೆಯವರು ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರದಲ್ಲಿ ನಡೆದಿದೆ.

ಅಗೋಲಿ ಗ್ರಾಮದ ಮರಿಯಮ್ಮ (21) ಮೃತ ಯುವತಿ.ವಿಠಲಾಪುರದಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿದ್ದ ವೇಳೆ ಅದೇ ಗ್ರಾಮದ ನಾಯಕ ಸಮುದಾಯದ ಯುವಕ ಹನುಮಯ್ಯ ಅವರ ಪರಿಚಯವಾಗಿದೆ. ಎರಡು ವರ್ಷಗಳಿಂದ ಅವರಿಬ್ಬರು ಪ್ರೀತಿಸಿ 2023 ರ ಏಪ್ರಿಲ್ ನಲ್ಲಿ ಗಂಗಾವತಿಯಲ್ಲಿ ಮದುವೆಯಾಗಿದ್ದರು.

ಮದುವೆಗೆ ಒಪ್ಪದ ಯುವಕನ ಕುಟುಂಬಸ್ಥರು ಆಗಸ್ಟ್ 29 ರಂದು ಯುವತಿಯನ್ನು ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾರೆ. ಯುವಕನ ಕುಟುಂಬದ 13 ಜನರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
Share This Article
error: Content is protected !!