Ad imageAd image

ಸಂಕ್ರಾಂತಿ ಹಬ್ಬಕ್ಕೆ ಬಂದ ಅಳಿಯನಿಗೆ 158 ಬಗೆಯ ಅಡುಗೆ ಮಾಡಿದ ಅತ್ತೆ 

Bharath Vaibhav
ಸಂಕ್ರಾಂತಿ ಹಬ್ಬಕ್ಕೆ ಬಂದ ಅಳಿಯನಿಗೆ 158 ಬಗೆಯ ಅಡುಗೆ ಮಾಡಿದ ಅತ್ತೆ 
WhatsApp Group Join Now
Telegram Group Join Now

ಸಂಕ್ರಾಂತಿ ಹಬ್ಬ ಹಾಗೂ ಹೊಸ ಅಳಿಯಂದಿರ ನಡುವೆ ಅವಿನಾಭಾವ ಸಂಬಂಧವಿದೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿ, ಅಳಿಯನನ್ನು ಲಕ್ಷ್ಮಿ ಮತ್ತು ನಾರಾಯಣರ ನಿಜವಾದ ಸಾಕಾರವೆಂದು ಪರಿಗಣಿಸಿ ಅತ್ತೆ-ಮಾವಂದಿರುವ ನೀಡುವ ಆತಿಥ್ಯವು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಪ್ರೀತಿ ಮತ್ತು ಗೌರವದ ಮಿಶ್ರಣವಾಗಿರುವ ಈ ಸಂಪ್ರದಾಯವನ್ನು ಎಲ್ಲಾ ಕಡೆ ಆಚರಿಸಲಾಗುತ್ತದೆ.

ಅಳಿಯನಿಗೆ ಅದ್ಧೂರಿ ಸ್ವಾಗತ

ಆಂಧ್ರ ಪ್ರದೇಶ ಗುಂಟೂರು ಜಿಲ್ಲೆಯ ತೆನಾಲಿಯ ವಂದನಾಪು ಮುರಳೀಕೃಷ್ಣ-ಲಕ್ಷ್ಮಿ ದಂಪತಿಗಳು ಕಳೆದ ವರ್ಷ ತಮ್ಮ ಮಗಳು ಮೌನಿಕಾಳನ್ನು ರಾಜಮಂಡ್ರಿಯ ಶ್ರೀದತ್ತ ಎಂಬುವವರಿಗೆ ಮದುವೆ ಮಾಡಿಕೊಟ್ಟರು. ಮದುವೆಯ ನಂತರ, ಅಳಿಯ ಶ್ರೀದತ್ತ ತಮ್ಮ ಮನೆಗೆ ಭೇಟಿ ನೀಡಿದ ಮೊದಲ ಸಂಕ್ರಾಂತಿಯನ್ನು ಸ್ಮರಣೀಯವಾಗಿಸಲು ಅತ್ತೆ-ಮಾವಂದಿರು ನಿರ್ಧರಿಸಿದರು. ಅಳಿಯನಿಗೆ ಅತ್ತೆ ಬರೋಬ್ಬರಿ 158 ಬಗೆಯ ಅಡುಗೆ ಮಾಡಿ ಬಡಿಸಿದ್ದಾರೆ.

ಔತಣಕೂಟದಲ್ಲಿ ತಮ್ಮ ಅಳಿಯನಿಗೆ 158 ಬಗೆಯ ಖಾದ್ಯಗಳನ್ನು ಬಡಿಸಿದರು. , ಹಲವು ಬಗೆಯ ಸಿಹಿತಿಂಡಿಗಳು, ಮಸಾಲೆಗಳು, ಉಪ್ಪಿನಕಾಯಿ ಮತ್ತು ವಿವಿಧ ರೀತಿಯ ಆಹಾರ ಪದಾರ್ಥಗಳು ಇದ್ದವು. ಊಟದ ಟೇಬಲ್ ನಲ್ಲಿ ಈ ಖಾದ್ಯಗಳನ್ನು ನೋಡಿ, ಹೊಸ ಅಳಿಯ ಮಾತ್ರವಲ್ಲದೆ ಸ್ಥಳೀಯರು ಸಹ ಅಚ್ಚರಿ ವ್ಯಕ್ತಪಡಿಸಿದರು.

ಇದನ್ನು ನೋಡಿದ ಅಳಿಯ, ತನ್ನ ಅತ್ತೆ-ಮಾವ ತೋರಿಸಿದ ಅಸಾಧಾರಣ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ತನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಗೌರವವನ್ನು ನೀಡಿದ್ದಕ್ಕಾಗಿ ಅವರು ತಮ್ಮ ಅತ್ತೆ-ಮಾವಂದಿರಿಗೆ ಧನ್ಯವಾದ ಅರ್ಪಿಸಿದರು. ‘ಅತಿಥಿ ದೇವೋಭವ’ ಎಂಬ ಪರಿಕಲ್ಪನೆಯು ಇಂದಿನ ಆಧುನಿಕ ಕಾಲದಲ್ಲಿಯೂ ಜೀವಂತವಾಗಿರುವುದು ದೊಡ್ಡ ವಿಷಯ ಎಂದು ಕುಟುಂಬ ಸದಸ್ಯರು ಸಂತೋಷದಿಂದ ಹೇಳಿದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!