Ad imageAd image
- Advertisement -  - Advertisement -  - Advertisement - 

ನಾಯಿ, ಹಂದಿಗಳು ಕುಡಿಯುವ ನೀರನ್ನೇ ಊರಿನ ಜನ ಕುಡಿಬೇಕು.

Bharath Vaibhav
ನಾಯಿ, ಹಂದಿಗಳು ಕುಡಿಯುವ ನೀರನ್ನೇ ಊರಿನ ಜನ ಕುಡಿಬೇಕು.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಮದನಾ ಗ್ರಾಮದ ಪಿಡಿಒ ಅವರು ಗ್ರಾಮದ ಅಭಿವೃದ್ಧಿ ಕುರಿತು ಸ್ವಲ್ಪ ಕೂಡ ಗಮನ ಕೊಡುತ್ತಿಲ್ಲ ಅಷ್ಟೇ ಅಲ್ಲದೆ ಸಮಯ ಸಂಧರ್ಭವಿಲ್ಲದೆ ಮನ ಬಂದಂತೆ ಡ್ಯೂಟಿ ಗೆ ಬರುತ್ತೆರೆ ಎಂದು ಇಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯತ್ ಅಧಿಕಾರಿ ವಿರುದ್ಧ ಗ್ರಾಮ ಪಂಚಾಯತ್ ಕಾರ್ಯಾಲಯ ಮುಂದೆ ಹೋರಾಟ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಓಟಿಎಚ್ ನೀರಿನ ಟ್ಯಾಂಕ್ ನಿಂದ ಬರುವ ನೀರಿನ ಪೈಪ್ ಹೊಡೆದು ಹೋಗಿರುತ್ತದೆ.ಅಲ್ಲಿ ಹುಡೆದಿರುವ ಪೈಪ್ ಹತ್ತಿರ ನಾಗಿ ಹಾಗೂ ಹಂದಿಗಳು ಕುಡಿದು ಅದೇ ನೀರು ಪುನಃ ಪೈಪ್ ಒಳಗೆ ಹೋಗುತ್ತವೆ ಅ ನೀರೆ ಪುನಃ ಜನರ ಮನೆಗಳಿಗೆ ಹೋಗುತ್ತವೆ ಅದನ್ನೇ ಗ್ರಾಮಸ್ಥರು ಕುಡಿಯುವ ಪರಿಸ್ಥಿತಿ ಬಂದಿದೆ.

ಇದರ ಕುರಿತು ಅನೇಕ ಬಾರಿ ಪಿಡಿಒ ಅವರಿಗೆ ತಿಳಿಸಿದರೆ ಸ್ವಲ್ಪ ಕೂಡ ಗಮನ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಇಂದು ತೀವ್ರ ಹೋರಾಟಕ್ಕೆ ಕೂತಿದ್ದರು.ಆದರೆ ಪಿಡಿಒ ಅವರು ಕಾರ್ಯಾಲಯಕ್ಕೆ ಸುಮಾರು 11 ಗಂಟೆ ಆದರೂ ಸಹ ಬಂದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಈ ಅಧಿಕಾರಿಗಳು ಸುಮಾರು ತಿಂಗಳಿಂದ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದು ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಒಂದು ನೀರಿನ ಸಮಸ್ಯೆ ಅಷ್ಟೇ ಅಲ್ಲ ಊರಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಇವರು ಸ್ವಲ್ಪ ಕೂಡ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!