ಸಿಂಧನೂರು : ಸೇ4 ರಂದು ನಗರದ ಮಿಲಾಪ್ ಶಾದಿ ಮಹಲ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ದ್ವನಿ ಬೆಂಗಳೂರು ಹಾಗೂ ತಾಲೂಕ ಸಮಿತಿ ಸಿಂಧನೂರು ವತಿಯಿಂದ ಎರಡು ದಿನಗಳ ಕಾಲ ನಡೆದ ಪತ್ರಿಕಾ ಕಾರ್ಯಗಾರ ಹಾಗೂ ನೂತನ ಕಾ.ನಿ.ಪ ದ್ವನಿ ಸಂಘಟನೆಯ ಪದಗ್ರಹಣ ಕಾರ್ಯಕ್ರಮವು ದಿ! ಪತ್ರಕರ್ತರಾದ ಶರಣೆಗೌಡ ಗೊರೆಬಾಳ ಹಾಗೂ ಶರಣು. ಪಾ ಹಿರೇಮಠ ರವರ ವೇದಿಕೆಯಡಿಯಲ್ಲಿ ಪೂಜ್ಯರು ಮತ್ತು ಗಣ್ಯ ಮಾನ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆ ಹಂಪನಗೌಡ ಬಾದರ್ಲಿ ಶಾಸಕರು ಸಿಂಧನೂರು. ಅಧ್ಯಕ್ಷತೆ ಮಲ್ಲಿಕಾರ್ಜುನ್ ಬಂಗ್ಲೆ ರಾಜ್ಯಧ್ಯಕ್ಷರು ಕಾನಿಪ ದ್ವನಿ ಬೆಂಗಳೂರು ಹಾಗೂ ವೆಂಕಟೇಶ್ ನಾಯಕ ತಾಲೂಕಾಧ್ಯಕ್ಷರು ಕಾನಿಪ ಧ್ವನಿ ಸಿಂಧನೂರು ವಹಿಸಿಕೊಂಡಿದ್ದು ಕಾರ್ಯಕ್ರಮ ನಿರೂಪಣೆ ಸೈಯದ್ ಬಂದನೆವಾಜ್ ಕಾನಿಪ ಧ್ವನಿ ಪ್ರ. ಕಾರ್ಯದರ್ಶಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಾನಿಪ ಧ್ವನಿ ಪದಾಧಿಕಾರಿಗಳಾದ ವಿಜಯಕುಮಾರ. ಶರಣಬಸವ. ಬಸವರಾಜ ಬುಕ್ಕನಟ್ಟಿ. ಮೌನೇಶ್ ನಾಯಕ. ಗ್ಯಾನಪ್ಪ. ಸಿದ್ದರಾಮಶ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅನೇಕ ಕಾನಿಪ ಸಂಘದ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ : ಬಸವರಾಜ ಬುಕ್ಕನಹಟ್ಟಿ




