Ad imageAd image
- Advertisement -  - Advertisement -  - Advertisement - 

ಮಾರ್ಕಂಡೇಯ ನದಿಗೆ ಬಿದ್ದು ಸವಾರ ನೀರುಪಾಲು, ಓರ್ವ ಪಾರು 

Bharath Vaibhav
ಮಾರ್ಕಂಡೇಯ ನದಿಗೆ ಬಿದ್ದು ಸವಾರ ನೀರುಪಾಲು, ಓರ್ವ ಪಾರು 
DEATH
WhatsApp Group Join Now
Telegram Group Join Now

ಬೆಳಗಾವಿ: ತಾಲ್ಲೂಕಿನ ಬಿ.ಕೆ. ಕಂಗ್ರಾಳಿಯಲ್ಲಿ ಶನಿವಾರ ರಾತ್ರಿ ಬೈಕೊಂದು ಮಾರ್ಕಂಡೇಯ ನದಿಗೆ ಬಿದ್ದು, ಒಬ್ವ ಸವಾರ ನೀರುಪಾಲಾಗಿದ್ದು, ಇನ್ನೊಬ್ಬ ಈಜಿ ದಡ ಸೇರಿದ್ದಾರೆ.

ತಾಲ್ಲೂಕಿನ ಅಳತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23) ನೀರಿನಲ್ಲಿ ಕೊಚ್ಚಿಕೊಂಡು‌ ಹೋದ ಯುವಕ.ಇವರ ಸಹೋದರ ಜ್ಯೋತಿನಾಥ ಪಾಟೀಲ ಈಜಿ ದಡ ಸೇರಿದ್ದಾರೆ.

ಇಬ್ಬರೂ ಸಹೋದರರು ಅಳತಗಾದಿಂದ ಕಂಗ್ರಾಳಿಗೆ ಕ್ಷೌರ ಮಾಡಿಸಿಕೊಳ್ಳಲು ಹೊರಟಿದ್ದರು. ನದಿ ಹರಿಯುವ ಜಾಗದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕಾಗಮಿಸಿದ ಕಾಕತಿ ಠಾಣೆ ಪೊಲೀಸರು ಓಂಕಾರ ಪಾಟೀಲಗಾಗಿ ಶೋಧ ಕಾರ್ಯ ಶುರು ಮಾಡಿದರು. ಡಿಸಿಪಿ ಪಿ.ವಿ.ಸ್ನೇಹಾ ಅವರು ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಎನ್.ಡಿ.ಆರ್.ಎಫ್ ತಂಡ ಕೂಡ ಕರಿಸಲಾಗಿದ್ದು ಶೋಧ ಕಾರ್ಯ ರಾತ್ರಿಯೂ ನಡೆದಿದೆ.

WhatsApp Group Join Now
Telegram Group Join Now
Share This Article
error: Content is protected !!