ಯಳಂದೂರು : ಠಾಣಾ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಎಸ್ ಸಿ, ಎಸ್ ಟಿ ಜನಾಂಗದ ಮುಖಂಡರುಗಳ ಕುಂದುಕೊರತೆ ಸಭೆಯನ್ನು ನೆಡೆಸಲಾಯಿತು.
ಸಭೆಯಲ್ಲಿ ಆಗಮಿಸಿದ ಜನರು ಹಲವಾರು ಸಮಸ್ಯೆಗಳನ್ನು ತಿಳಿಸಿದರು ಅದರಲ್ಲಿ ಮುಖ್ಯವಾಗಿ ಬೈಕ್ ಅಪಘಾತಗಳು ಇತೀಚಿನ ದಿನದಲ್ಲಿ ಹೆಚ್ಚು ಆಗುತ್ತಿದೆ ಅದನ್ನು ತಡೆಯಲು ಕ್ರಮವಹಿಸಬೇಕು ರಸ್ತೆಗಲ್ಲಿ ಬೇರೆ ಬೇರೆ ವಾಹನಗಳು ನಿಲ್ಲಿಸಿ ಹೋಗಿರುತಾರೆ ಕತ್ತಲಲ್ಲಿ ಬೈಕ್ ಹೊಡಿಸುವವರು ಬಂದು ಬಿಳುತಿದ್ದರೆ, ಇವತ್ತಿನ ಯುವಕರು ಮದ್ಯಪಾನಕೆ ದಾಸರಗಿದರೆ ಗ್ರಾಮಗಲ್ಲಿ ಮದ್ಯಪಾನ ಮಾರುವವರ ಹೆಚ್ಚಾಗಿದು ಹೇಳುವರು ಯಾರು ಇರದಂತಾಗಿದೆ ಇವರುಗಳ ವಿರುದ್ಧ ಕ್ರಮ ಜರುಗಿಸಬೇಕು ಆಗೇ ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರಾಜಣ್ಣ ಯರಿಯೂರು ಮಾತನಾಡಿ ಬೈಪಾಸ್ ರಸ್ತೆಗಳಳಿ ಹೆಚ್ಸಿ ಅಪಘಾತಕೆ ಕಾರಣ ಅಲ್ಲಿ ಯಾವುದೇ ಸಿಗ್ನಲ್ ಲೈಟ್ ಅಳವಡಿಸದೆ ಇರುವುದು ವಾಹನ ಸವಾರರು ವೇಗವಾಗಿ ಹೋಗುತಿದಾರೆ ಬೈಪಾಸ್ ರಸ್ತೆಗೆ ಸೇರುವ ರಸ್ತೆಗಳಿಗೆ ಅಪಘಾತದ ನಾಮಫಲಕ ಹಾಗೂ ಸಿಗ್ನಲ್ ದೀಪಗಳನ್ನು ಅಳವಡಿಸಿದರೆ ರಸ್ತೆ ಅಪಘಾತ ಕಡಿಮೆ ಆಗಬಹುದು ಎಂದರು.
ಮುಖಂಡರಾದ ಯರಗಂಬಳ್ಳಿ ಮಲ್ಲು ಮಾತನಾಡಿ ಯಳಂದೂರು ರಸ್ತೆಗಳು ಆಟೋಗಳ ನಿಲ್ದಾಣವಾಗಿದೆ ಎಲ್ಲಿಬೇಕೆಂದರೆ ಅಲ್ಲಿ ಆಟೋಗಳನ್ನು ನಿಲ್ಲಿಸಿ ರಸ್ತೆಯಲ್ಲಿ ತಿರುಗಾಡುವರಿಗೆ ತೊಂದರೆ ನೀಡುತಿದ್ದರೆ ಅವರಿಗೆ ಒಂದು ನಿಗದಿಯದ ಸ್ಥಳವನ್ನು ನೀಡಬೇಕು ಬಸ್ ನಿಲ್ದಾಣದ ಪಕ್ಕ ಬೈಕ್ ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಎಲ್ಲಿ ಅಂದರಲ್ಲಿ ನಿಲ್ಲಿಸಿ ಇಂಬದಿಯ ರಸ್ತೆಗೆ ಹೋಗದ ರೀತಿಯಾಗಿದೆ ಅದನ್ನು ನೀವು ಗಮನಿಸಿ ಪರಿಹರಿಸಬೇಕು ಎಂದು ತಿಳಿಸಿದರು.
ಕೆಸ್ತೂರು ರಾಜು ರವರು ಮಾತನಾಡಿ ರಸ್ತೆಗಳ್ಳಿ ಪಟ್ಟಣದ ರಸ್ತೆಬದಿಯಲ್ಲಿ ಅಂಗಡಿ ಅಕಿರುವುದು ಜನರಿಗೆ ಕಿರಿಕಿರಿ ಉಂಟುಮಾಡುತಿದೆ ಅವರನ್ನು ಸಾರ್ವಜನಿಕರು ತಿರುಗಾಡಲು ಸಂಚಾರ ಸುಗಮ ಆಗಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವೃತ್ತ ನಿರೀಕ್ಷೆಕಾರದ ಶ್ರೀಕಾಂತ್ ರವರು ಮಾತನಾಡಿ ನಾವು ಬೈಕ್ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುತಿದ್ದೇವೆ ಶಾಲೆ ಕಾಲೇಜುಗಲ್ಲಿ ಮಾದಕ ವಸ್ತುಗಳ ದುಷ್ಟಪರಿಣಾಮಗಳ ಬಗ್ಗೆ ತಿಳಿಸುತಿದ್ದೇವೆ ರಸ್ತೆಗಳ್ಳಿ ನಿಲ್ಲಿಸುವ ವಾಹನಗಳು ನಿಲ್ಲಿಸದಂತೆ ನೋಡುಕೊಳ್ಳುತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಯಳಂದೂರು ವೃತ್ತ ನಿರೀಕ್ಷೆಕಾರದ ಶ್ರೀಕಾಂತ್, ಯಳಂದೂರು ಠಾಣಾ ಪಿ ಎಸ್ ಐ ಆಕಾಶ್ ಮಾಂಬಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ಕರಿಬಸಪ್ಪ, ಹಾಗೂ ಎಸ್ ಸಿ. ಎಸ್ ಟಿ. ಸಂಘದ ಮುಖಂಡರುಗಳು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




