Ad imageAd image
- Advertisement -  - Advertisement -  - Advertisement - 

ರಾಜ್ಯ ಸರ್ಕಾರಕ್ಕೆ‌ ನೌಕರರ ಸಂಘದಿಂದ ಅಭಿನಂದನೆ: ಬೆಂಗಳೂರಿಗೆ ತೆರಳಿದ ತಾಲೂಕು ಸರ್ಕಾರಿ ನೌಕರರು

Bharath Vaibhav
ರಾಜ್ಯ ಸರ್ಕಾರಕ್ಕೆ‌ ನೌಕರರ ಸಂಘದಿಂದ ಅಭಿನಂದನೆ: ಬೆಂಗಳೂರಿಗೆ ತೆರಳಿದ ತಾಲೂಕು ಸರ್ಕಾರಿ ನೌಕರರು
WhatsApp Group Join Now
Telegram Group Join Now

ತುರುವೇಕೆರೆ:- ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಇಂದು ನಡೆಯಲಿರುವ ಅಭಿನಂದನಾ ಸಮಾರಂಭಕ್ಕೆ ತುರುವೇಕೆರೆ ತಾಲೂಕಿನಿಂದ ನೂರಕ್ಕೂ ಅಧಿಕ ಸರ್ಕಾರಿ ನೌಕರರು ತೆರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ, ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ 7ನೇ ವೇತನ ಜಾರಿಗೊಳಿಸಿದ ಸರ್ಕಾರಕ್ಕೆ ನೌಕರರ ಸಂಘದಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.

7ನೇ ವೇತನ ಜಾರಿಗೆ ಸರ್ಕಾರವನ್ನು ಹಲವು ಬಾರಿ ಒತ್ತಾಯಿಸಲಾಗಿತ್ತು. ಬೇಡಿಕೆ ಶೀಘ್ರ ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಭರವಸೆ ಈಡೇರಿಸಿದ್ದು ಸರ್ಕಾರ ನುಡಿದಂತೆ ನಡೆದಿದೆ. ನೌಕರರ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸರ್ಕಾರದ ಸಂಪುಟ ಸಚಿವರುಗಳಿಗೆ ಸರ್ಕಾರಿ ನೌಕರರ ಸಂಘದಿಂದ ಅಭಿಮಾನಪೂರ್ವಕ ಅಭಿನಂದನೆಯನ್ನು ಇಂದು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಈ‌ ಹಿನ್ನೆಲೆಯಲ್ಲಿ ತಾಲೂಕಿನ ನೂರಕ್ಕೂ ಅಧಿಕ ಸರ್ಕಾರಿ‌ ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಹೇಳಿದರು. ನೌಕರರ ಸಂಘದ ಷಣ್ಮುಖಪ್ಪ, ಎಂ.ಎನ್.ರಾಜು, ಬಸವರಾಜು, ಉಮೇಶ್, ಎಂ.ಬಿ.ಲೋಕೇಶ್, ಕೃಷ್ಣೇಗೌಡ, ಪರಶಿವಮೂರ್ತಿ, ರಾಘವೇಂದ್ರ, ಸುರೇಶ್, ದಿನೇಶ್ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಸರ್ಕಾರಿ ನೌಕರರು ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ವರದಿ: -ಗಿರೀಶ್ ಕೆ‌ ಭಟ್

WhatsApp Group Join Now
Telegram Group Join Now
Share This Article
error: Content is protected !!