ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಫಸಲ ಭಿಮಾ ಯೋಜನೆ ಜಾಗೃತೆ ಮೂಡಿಸುವ ವಾಹನ ಚಾಲನೆ
ಬೀದರ್ : ಸಂಸದರಾದ ಸಾಗರ ಖಂಡ್ರೆ ಅವರು ಇಂದು ಬೀದರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ, ದಿಶಾ ಸಮಿತಿ ಸಭೆಗೆ ಮುನ್ನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ,ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಅದೇ ವೇಳೆ, ಜಿಲ್ಲೆಯ 83 ಗ್ರಾಮ ಗ್ರಂಥಾಲಯಗಳಿಗೆ ಇಂಟರ್ನೆಟ್ ಸಂಪರ್ಕ ಹಾಗೂ ಪುಸ್ತಕ ಕಿಟ್ಟುಗಳನ್ನು ವಿತರಿಸಿ, ಗ್ರಾಮೀಣ ಮಕ್ಕಳಿಗೆ ಹಾಗೂ ಓದುಗರಿಗೆ ಜ್ಞಾನವೃದ್ಧಿಗೆ ಉಪಯುಕ್ತವಾಗುವಂತಹ ಈ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ:ಸಂತೋಷ ಬಿಜಿ ಪಾಟೀಲ್



		
		
		
