Ad imageAd image

ಮಠಕ್ಕೆ ನುಗ್ಗಿ ಸ್ವಾಮೀಜಿ ಹಣೆಗೆ ಗನ್ ಇಟ್ಟು 20 ಲಕ್ಷ ರೂ. 80 ಗ್ರಾಂ ಚಿನ್ನ ದರೋಡೆ 

Bharath Vaibhav
ಮಠಕ್ಕೆ ನುಗ್ಗಿ ಸ್ವಾಮೀಜಿ ಹಣೆಗೆ ಗನ್ ಇಟ್ಟು 20 ಲಕ್ಷ ರೂ. 80 ಗ್ರಾಂ ಚಿನ್ನ ದರೋಡೆ 
WhatsApp Group Join Now
Telegram Group Join Now

ರಾಯಚೂರು; ಮಠಕ್ಕೆ ಮುಗ್ಗಿದ ದರೋಡೆಕೋರರು ಸ್ವಾಮೀಜಿಯನ್ನು ಬೆದರಿಸಿ, ಮಠದಲ್ಲಿದ್ದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ನಗರನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಈ ಘಟನೆ ನಡೆದಿದೆ.

ಗುರುವಾರ ರಾತ್ರಿ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಒಬ್ಬರೇ ಇದ್ದರು.. ಈ ವೇಳೆ ಮಠಕ್ಕೆ ನುಗ್ಗಿರುವ ದರೋಡೆಕೋರರು, ಸ್ವಾಮೀಜಿಯನ್ನು ಬೆದರಿಸಿದ್ದಾರೆ.

ಅನಂತರ ಮಠದಲ್ಲಿ ಸುಮಾರು 20 ಲಕ್ಷ ರೂಪಾಯಿ ನಗದು, 80 ಗ್ರಾಂ ಚಿನ್ನ ಹಾಗೂ 7 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.. ದರೋಡೆಕೋರರು ಅಲ್ಲಿಂದ ತೆರಳಿದ ನಂತರ ಸ್ವಾಮೀಜಿ ಕಿರುಚಿಕೊಂಡಿದ್ದು, ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ.

ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.. ಪೊಲೀಸ್​ ಇನ್ಸ್​​ಸ್ಪೆಕ್ಟರ್​​ ಪುಂಡಲಿಕ್​ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!